ಕೋಲಾರ : ಸಚಿವರ ಸಮ್ಮುಖದಲ್ಲೇ ಬಿಜೆಪಿ ಸಂಸದ - ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ

Update: 2020-12-31 11:18 GMT

ಕೋಲಾರ : ಸಚಿವರ ಸಮ್ಮುಖದಲ್ಲೇ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ನಡೆದಿದೆ.

ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಕ್ರಷರ್ ಗೆ ಭೇಟಿ ನೀಡಿದ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಕ್ರಷರ್ ಜಾಗದಲ್ಲಿ ಗುಂಡು ತೋಪು ಇತ್ತು ಎಂದು ಸಂಸದರು ಹೇಳುತ್ತಿದ್ದಾಗ, ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಂಜೇಗೌಡ ನಡುವೆ ಮಾತಿನ ಚಕಮಕಿ ನಡೆಯಿತು. ವೈಯಕ್ತಿಕ ವಿಚಾರಗಳನ್ನ ಪ್ರಸ್ತಾಪ ಮಾಡದೆ, ರಾಜಕೀಯ ಬೆರಸದಂತೆ ಶಾಸಕ ನಂಜೇಗೌಡ ಹೇಳಿದರು ಎಂದು ತಿಳಿದುಬಂದಿದೆ. 

ಸಚಿವರು ಕ್ರಷರ್ ಬೇಟಿ ನೀಡಿರುವುದು ಒಳ್ಳೆಯ ಕೆಲಸ, ನಮಗೂ ಸಮಸ್ಯೆ ಹೇಳಿಕೊಳ್ಳಲು ಸಹಕಾರಿಯಾಗುತ್ತದೆ. ಇದರ ಮದ್ಯೆ ವೈಯಕ್ತಿಕ ನೆಲೆಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದು ಸಂಸದ ಮುನಿಸ್ವಾಮಿಗೆ ಶಾಸಕ ನಂಜೇಗೌಡ ಹೇಳಿರುವುದಾಗಿ ತಿಳಿದುಬಂದಿದೆ. ಸಚಿವರ ಎದುರೆ ಸಂಸದ ಹಾಗು ಶಾಸಕರ ವಾಗ್ವಾದ ಸಾರ್ವಜನಿಕ ವಲಯದಲ್ಲಿ ಮುಜುಗರ ಉಂಟುಮಾಡಿತು.

ಕೋಲಾರದ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯಲ್ಲಿರುವ ಕೊಮ್ಮನಹಳ್ಳಿ ಕ್ರಷರ್ ಬಳಿ ಘಟನೆ ನಡೆದ ನಂತರ ಕ್ರಷರ್ ಎಷ್ಟು ರಾಯಲ್ಟಿ ಸಂದಾಯ ಮಾಡಿದೆ ಎಂದು ಸಚಿವರು ಇಲಾಖಾ ಅಧಿಕಾರಿಗಳನ್ನು ಕೇಳಿ,  ಶೀಘ್ರದಲ್ಲೇ ಪೂರ್ಣ ಪ್ರಮಾಣದ ಮಾಹಿತಿ ನೀಡಲು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News