ಮಡಿಕೇರಿ: ಬ್ಯಾಂಕ್ ಮಹಿಳಾ ಉದ್ಯೋಗಿ ಆತ್ಮಹತ್ಯೆ

Update: 2020-12-31 15:57 GMT

ಮಡಿಕೇರಿ, ಡಿ.31: ಬ್ಯಾಂಕ್ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂರ್ನಾಡು ಸುಭಾಷ್ ನಗರದಲ್ಲಿ ನಡೆದಿದೆ. 

ಮೂರ್ನಾಡು ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಕು.ವಿದ್ಯಾರಶ್ಮಿ ಎಂಬವರೇ ಸಾವಿಗೀಡಾದವರು. 

ಮೂಲತಃ ಮೂರ್ನಾಡು ಸುಭಾಷ್‍ನಗರ ನಿವಾಸಿಯಾಗಿದ್ದ ವಿದ್ಯಾರಶ್ಮಿ ಕಳೆದ 7 ವರ್ಷಗಳಿಂದ ಸ್ಟೇಟ್ ಬ್ಯಾಂಕ್ ಉದ್ದೋಗಿಯಾಗಿದ್ದು, ಗುರುವಾರ ಬ್ಯಾಂಕಿಗೆ ತೆರಳದೇ ಮನೆಯಲ್ಲಿಯೇ ಉಳಿದು ಕೊಂಡಿದ್ದರು. ಯಾರೂ ಇಲ್ಲದ ಸಂದರ್ಭ ಮಧ್ಯಾಹ್ನ ಮನೆಯ ಮೇಲ್ಚಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 

ಮೃತಳ ಪೋಷಕರು ನೀಡಿದ ದೂರಿನಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News