ಭದ್ರಾವತಿಯಲ್ಲಿ ಸ್ಥಾಪನೆಗೊಳ್ಳಲಿರುವ ಕೇಂದ್ರ ಮೀಸಲು ಪಡೆಯ ಸ್ಥಳ ಪರಿಶೀಲನೆ

Update: 2021-01-03 14:16 GMT

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಭದ್ರಾವತಿಯಲ್ಲಿ ಸ್ಥಾಪನೆಗೊಳ್ಳಲಿರುವ ಕೇಂದ್ರ ಮೀಸಲು ಪಡೆಯ ಸ್ಥಳವನ್ನು ರವಿವಾರ ಪರಿಶೀಲಿಸಿದರು.

ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸ್ಥಾಪನೆಯ ಶಿಲಾನ್ಯಾಸ ನೆರವೇರಿಸಲು ಬರಲಿದ್ದಾರೆ.

ಹೀಗಾಗಿ, ಸ್ಥಳ ಪರಿಶೀಲನೆಗಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ  ಪ್ರತಾಪ್ ರೆಡ್ಡಿ, ರಾಜ್ಯ ಗುಪ್ತ ವಾರ್ತೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ದಯಾನಂದ್, ಪೂರ್ವ ವಲಯ ಐಜಿಪಿ ದಾವಣಗೆರೆ ಎಸ್.ರವಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಿವಮೊಗ್ಗ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು, ಕೇಂದ್ರ ಮೀಸಲು ಪೋಲಿಸ್ ಪಡೆ ಐ.ಜಿ.ಪಿ.ಗಳಾದ ಸಂಜಯ್ ಲಾತ್ಕರ್, ರಾಧಾ ಮೋಹನ್ ಮೀನಾ, ಡಿಐಜಿ ಬಿಜಯ್ ಘೋಶ್, ಆರ್‌ಎಎಫ್ ಕಮಾಂಡೆಟ್ ಎರಿಕ್ ಜೋಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News