ಸಚಿವ ಮಾಧುಸ್ವಾಮಿಯ ದರ್ಪ, ದೌರ್ಜನ್ಯ ಎಲ್ಲೆ ಮೀರಿದೆ: ಕಾಂಗ್ರೆಸ್ ಕಿಡಿ

Update: 2021-01-07 17:36 GMT

ಬೆಂಗಳೂರು, ಜ.7: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ದರ್ಪ, ದೌರ್ಜನ್ಯಗಳು ಎಲ್ಲೆ ಮೀರಿದೆ. ಅಧಿಕಾರಿಗಳ ಕರ್ತವ್ಯ ಲೋಪವಿದ್ದರೆ ಸಭ್ಯತೆಯ ಚೌಕಟ್ಟಿನೊಳಗೆ ಮಾತನಾಡಿ. ಅವರ ಹೆಂಡತಿ, ಮಕ್ಕಳ ವೈಯಕ್ತಿಕ ವಿಚಾರ ಮಾತನಾಡುವುದು ನಿಮ್ಮಂತ ಹಿರಿಯರಿಗೆ ಹಾಗೂ ಪ್ರಭಾವಿ ಸ್ಥಾನದಲ್ಲಿರುವವರಿಗೆ ಶೋಭೆ ತರುವುದೇ ಸಚಿವರೇ? ರಾಜ್ಯ ಬಿಜೆಪಿ ಇದೇನಾ ನಿಮ್ಮ ಪಕ್ಷದ ಸಂಸ್ಕೃತಿ, ಸಭ್ಯತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿಗೆ ಮಾನ ಇದೆಯೇ: ನಿಮ್ಮ ಶಾಸಕರೇ ಕಣ್ಣೀರಿಡುವ ದುರಾಡಳಿತವಿರುವಾಗ, ಹರಾಜಾಗಲು ನಿಮಗೆ ಮಾನ ಎಲ್ಲಿದೆ ರಾಜ್ಯ ಬಿಜೆಪಿ? ಡಿ.ವಿ.ಸದಾನಂದಗೌಡ ಹೇಳಿದಂತೆ ಬಿಜೆಪಿಯ ಶಾಸಕರಲ್ಲಿ ‘ಸಾಮಾನ್ಯರು’ ‘ಅಸಾಮಾನ್ಯರು’ ಎಂಬ ತಾತ್ಸಾರ, ತಾರತಮ್ಯವಿರುವುದು ಬಹಿರಂಗವಾಗಿದೆ. ಕಮಿಷನ್, ವರ್ಗಾವಣೆ ದಂಧೆಯ ‘ವಿಎಸ್‍ಟಿ’ ಕಾಟದಿಂದ ಜನಪ್ರತಿನಿಧಿಗಳೆ ಕಂಗಾಲಾಗಿರುವಾಗ, ಜನರ ಗೋಳು ಇನ್ನೆಷ್ಟು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News