ಉದ್ಯಮಿಯ ಬ್ಯಾಂಕ್ ಖಾತೆಯಿಂದ ಹಣ ಮಾಯ: ದೂರು ದಾಖಲು

Update: 2021-01-09 15:53 GMT

ಶಿವಮೊಗ್ಗ, ಜ.09: ಹಣವೂ ಡ್ರಾ ಮಾಡಿಲ್ಲ, ಆನ್‌ಲೈನ್ ವ್ಯವಹಾರವನ್ನೂ ನಡೆಸಿಲ್ಲ, ಆದರೂ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಣ್ಮರೆಯಾದ ಘಟನೆ ನಡೆದಿದೆ.

ತೀರ್ಥಹಳ್ಳಿಯ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 83,017 ರೂ. ಹಣ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ. 2020 ಡಿಸೆಂಬರ್ 25ರ ನಡುವೆ ಈ ಹಣವು ಖಾತೆಯಿಂದ ಕಣ್ಮರೆಯಾಗಿದೆ. ಹಣ ಕಡಿತವಾಗಿರುವ ಬಗ್ಗೆ ಉದ್ಯಮಿಯ ಮೊಬೈಲ್‌ಗೆ ಮೆಸೇಜ್ ಬಂದಿಲ್ಲ. ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ಪರಿಶೀಲನೆ ನಡೆಸಿದಾಗ ಹಣ ಕಣ್ಮರೆಯಾಗಿರುವುದು ತಿಳಿದುಬಂದಿದೆ.

ತಮ್ಮ ಬ್ಯಾಂಕ್ ವಿವರವನ್ನು ಈ ಉದ್ಯಮಿ ಯಾರೊಬ್ಬರಿಗೂ ತಿಳಿಸಿಲ್ಲ. ಹಾಗಿದ್ದರೂ ಕೂಡ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವುದು ಹೇಗೆ ಅನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಉದ್ಯಮಿ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News