ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದು ಮೃತಪಟ್ಟ ಯುವಕ
Update: 2021-01-12 14:43 GMT
ಶಿವಮೊಗ್ಗ, ಜ.12: ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ತುಂಗಾ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ಗಾಜನೂರಿನಲ್ಲಿ ನಡೆದಿದೆ.
ವಿನಾಯಕ( 22) ಮೃತ ಯುವಕ. ಮಂಗಳವಾರ ಗಾಜನೂರು ಡ್ಯಾಂ ನಲ್ಲಿ ಕುಟುಂಬ ಮತ್ತು ಕುಟುಂಬದ ಸ್ನೇಹಿತರ ಜೊತೆ ಬಂದಿದ್ದ ವಿನಾಯಕ ಸೆಲ್ಫಿ ತೆಗೆಯುವ ವೇಳೆ ಆಯತಪ್ಪಿ ನದಿಗೆ ಬಿದ್ದಿದ್ದಾನೆ. ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿಗಳು ಶೋಧಕಾರ್ಯ ನಡೆಸಿ ಯುವಕನ ಮೃತದೇಹ ಪತ್ತೆಹಚ್ಚಿದ್ದಾರೆ.
ಶೋಧಕಾರ್ಯದಲ್ಲಿ ಎಫ್ಎಸ್ಒ ಹುಲಿಯಪ್ಪ, ಲೀಡಿಂಗ್ ಫೈರ್ ಮ್ಯಾನ್ ಸುನೀಲ್, ಚಾಲಕ ಸತೀಶ್, ಫೈರ್ ಮ್ಯಾನ್ ಅರುಣ್, ಶಿವಕುಮಾರ್, ಪ್ರಭು ಹಾಗೂ ತುಂಗಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಸ್ಥಳೀಯರು ಭಾಗಿಯಾಗಿದ್ದರು.
ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.