ನನಗೆ ಬಲಾಢ್ಯ ಶತ್ರುಗಳಿದ್ದಾರೆ, ಸಚಿವನಾಗಿದ್ದು ದೊಡ್ಡ ಸಾಹಸ: ಸಿ.ಪಿ.ಯೋಗೇಶ್ವರ್
Update: 2021-01-13 17:58 GMT
ಬೆಂಗಳೂರು, ಜ.13: ರಾಜಕೀಯವಾಗಿ ನನಗೆ ಬಲಾಢ್ಯ ಶತ್ರುಗಳಿದ್ದಾರೆ. ನಾನು ಸಚಿವನಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿರುವುದು ದೊಡ್ಡ ಸಾಹಸ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ‘ಸಿಡಿ’ ಹೇಳಿಕೆ ಕುರಿತು ಬುಧವಾನ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹಿರಿಯರು. ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನೋಡಿದ ಬಳಿಕ ನಾಳೆ ಪ್ರತಿಕ್ರಿಯಿಸುತ್ತೇನೆ ಎಂದರು.
ರಾಜಕೀಯವಾಗಿ ನನಗೆ ಬಲಾಢ್ಯ ಶತ್ರುಗಳಿದ್ದಾರೆ. ಅವರು ಬೇರೆಯವರ ಮೂಲಕ ಈ ರೀತಿ ಹೇಳಿಸುತ್ತಿದ್ದಾರೆ ಎಂದು ಯೋಗೇಶ್ವರ್ ತಿಳಿಸಿದರು.