×
Ad

ಕಾರು- ಸಾರಿಗೆ ಬಸ್ ನಡುವೆ ಢಿಕ್ಕಿ: ಓರ್ವ ಸಾವು

Update: 2021-01-19 22:08 IST

ಕಲಬುರಗಿ: ಶ್ರೀಶೈಲದಿಂದ ಸೇಡಂ ಮಾರ್ಗವಾಗಿ ಆಳಂದ ತಾಲೂಕಿಗೆ ತೆರಳುತ್ತಿದ ಸಾರಿಗೆ ಬಸ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ, ಓರ್ವ ಮೃತಪಟ್ಟಿರುವ ಘಟನೆ ಸೇಡಂ ತಾಲ್ಲೂಕಿನ ಆಡಕಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. 

ಕಾರಲ್ಲಿದ್ದ ದೇವಪ್ಪ ಬುಡ್ಡ ಹಣಮಂತ (30) ಎಂಬ ಯುವಕ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಶ್ರೀಕಾಂತ ಸುಬ್ಬಣ್ಣ, ವಿರೇಶ ಮರಗಪ್ಪ, ತಿರುಪತಿ ಎಂಬವರ ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

ಹೂಡಾ ಬಿ ಗ್ರಾಮದಿಂದ ಹೈದರಾಬಾದ್ ಗೆ ಹೊರಟಿದ್ದ ಕಾರು, ಶ್ರೀಶೈಲದಿಂದ ಸೇಡಂ ಮಾರ್ಗವಾಗಿ ಆಳಂದ ತಾಲೂಕಿಗೆ ತೆರಳುತ್ತಿದ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.

ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News