ಯುವರಾಜ್ ವಂಚನೆ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ತನಿಖೆ ನಡೆಸುವಂತೆ ಸಿಸಿಬಿಗೆ ವಕೀಲರಿಂದ ದೂರು

Update: 2021-01-19 17:12 GMT

ಬೆಂಗಳೂರು, ಜ.19: ವಂಚಕ ಯುವರಾಜ್‍ಗೆ ನಿವೃತ್ತ ನ್ಯಾಯಮೂರ್ತಿ ಒಬ್ಬರು ಗವರ್ನರ್ ಹುದ್ದೆಗಾಗಿ ಹಣ ಸಂದಾಯ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ತನಿಖೆ ನಡೆಸಬೇಕೆಂದು ಸಿಸಿಬಿಗೆ ವಕೀಲ ಎನ್.ಪಿ. ಅಮೃತೇಶ್ ದೂರು ಸಲ್ಲಿಸಿದ್ದಾರೆ. 

ಯುವರಾಜ್ ಸ್ವಾಮಿ ಈಗಾಗಲೇ ಹಲವರಿಗೆ ಮೋಸ ಮಾಡಿದ್ದು, ಈ ಕೇಸ್‍ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯ ಹೆಸರೂ ಕೇಳಿಬಂದಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ.

ಈ ನಿವೃತ್ತ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ಯುವರಾಜ್ ವಂಚಿಸಿದ್ದಾನೆ. ಇವರು ಉನ್ನತ ಹುದ್ದೆಗಾಗಿ ಹಣ ಸಂದಾಯ ಮಾಡಿದ್ದಾರೆ. ತಾನೂ ಯುವರಾಜ್‍ನಿಂದ ಮೋಸ ಹೋಗಿದ್ದಾಗಿ ನಿವೃತ್ತ ನ್ಯಾಯಮೂರ್ತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಹಣ ನೀಡಿರುವ ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ತನಿಖೆಯಾಗಬೇಕು ಎಂದು ವಕೀಲ ಅಮೃತೇಶ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News