ಕೊಪ್ಪಳ: ಎಸ್ಸೆಸ್ಸೆಫ್ ನಿಂದ ಹೊಲದಲ್ಲಿ ಗಣರಾಜ್ಯೋತ್ಸವ
Update: 2021-01-27 17:39 GMT
ಕೊಪ್ಪಳ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಕೊಪ್ಪಳ ಜಿಲ್ಲಾ ವತಿಯಿಂದ ಧ್ವಜಾರೋಹಣ ಸಮಾರಂಭವನ್ನು ಬಸಾಪಟ್ಟಣದ ರೈತ ಹನುಮಂತಪ್ಪರಿಂದ ನೆರವೇರಿಸಲಾಯಿತು.
ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾಧ್ಯಕ್ಷ ಖಾಝಿ ರಾಶಿದ್ ಯಲಬುರ್ಗಾ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಖಾಜಾ ರಝಾ ಬರಕಾತಿ ಗಂಗಾವತಿ, ಮೆಹಬೂಬ್ ಬಸಾಪಟ್ಟಣ, ತಾಷಾ ಖಾಜಾ, ಸಿನಾನ್ ಮಆಲಿ, ನಾಸಿರ್ ಸಖಾಫಿ, ಹಾಫಿಝ್ ಬಾಸ್ವಿತ್ ಹಿಮಮಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರೈತ ಚಳುವಳಿಯನ್ನು ಬೆಂಬಲಿಸುತ್ತಾ ಎಸ್ಸೆಸ್ಸೆಫ್ ಈ ಬಾರಿ ರಾಷ್ಟ್ರದಾದ್ಯಂತ ರೈತರಿಂದ ಧ್ವಜಾರೋಹಣ ಮಾಡಲು ಕರೆ ನೀಡಿದೆ.