ಜ.31ರಂದು ಎಐಟಿಯುಸಿ 10ನೇ ಜಿಲ್ಲಾ ಸಮ್ಮೇಳನ

Update: 2021-01-28 17:59 GMT

ಬೆಂಗಳೂರು, ಜ.28: ಎಐಟಿಯುಸಿ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಜ.31ರಂದು ನಗರದಲ್ಲಿ ಎಐಟಿಯುಸಿಯ ಶತಮಾನೋತ್ಸವ ಹಾಗೂ 10ನೇ ಬೆಂಗಳೂರು ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. 

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಬೆಲೆಗಳ ಏರಿಕೆಯ ವಿರುದ್ಧ, ಕಾರ್ಮಿಕ-ವಿರೋಧಿ ಕಾನೂನು, ಸಂಹಿತೆಗಳ ವಿರುದ್ಧ ಹಾಗೂ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದು ಸೇರಿದಂತೆ ಕಾರ್ಮಿಕ ಹಾಗೂ ರೈತಪರವಾದ ತೀರ್ಮಾನಗಳ ಕುರಿತು ಚರ್ಚಿಸಲಾಗುತ್ತದೆ.

ಬೆಂಗಳೂರಿನ ವಿವಿಧ ಕೈಗಾರಿಕಾ ಪ್ರದೇಶಗಳಿಂದ, ಎಂಜಿನಿಯರಿಂಗ್, ಆಟೋಮೋಬೈಲ್, ಔಷಧಿ, ರಾಸಾಯನಿಕ, ಕಟ್ಟಡ ನಿರ್ಮಾಣ, ಪ್ಯಾಕೇಜಿಂಗ್ ಹಾಗೂ ಇತರೆ ಕಾರ್ಖಾನೆಗಳಿಂದ ಸುಮಾರು 250 ಕಾರ್ಮಿಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಎಐಟಿಯುಸಿ ಕಾರ್ಯಾಧ್ಯಕ್ಷ ಎಚ್.ಮಹದೇವನ್, ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್, ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ್ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News