ಓ ಮೆಣಸೇ...

Update: 2021-02-14 19:30 GMT

ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾವನ್ನ್ನೂ ಬಿಟ್ಟಿಲ್ಲ -ನರೇಂದ್ರ ಮೋದಿ, ಪ್ರಧಾನಿ

ಚಹಾ ಮಾರುವವರ ಹೆಸರಿಗೆ ಮಸಿ ಬಳಿದವರು ಯಾರು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತಿದೆ.


ಮಹಾರಾಷ್ಟ್ರ ಸರಕಾರವು ಮೂರು ಚಕ್ರಗಳ ಆಟೊರಿಕ್ಷಾವಾಗಿದ್ದು, ಮೂರೂ ಚಕ್ರಗಳು ಬೇರೆ ಬೇರೆ ದಿಕ್ಕಿನತ್ತ ಚಲಿಸಿವೆ- ಅಮಿತ್ ಶಾ, ಕೇಂದ್ರ ಸಚಿವ
ನೀವು ಬಿಡುತ್ತಿರುವ ಚಕ್ರವಿಲ್ಲದ ರೈಲಿಗಿಂತ ವಾಸಿ.


ದ.ಕ. ಜಿಲ್ಲೆಯಲ್ಲಿ ಕೊರೋನ ಕಣ್ಮರೆಯಾಗುವ ಹಂತದಲ್ಲಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬಹುಶಃ ಆಸ್ಪತ್ರೆಗಳ ಹೊಟ್ಟೆ ತುಂಬಿದ ಲಕ್ಷಣ ಸಿಕ್ಕಿರಬೇಕು.


ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತೇನೆ - ಎಸ್.ಅಂಗಾರ, ಸಚಿವ
ಕನಿಷ್ಠ ಇತರರು ಟೀಕೆ ಮಾಡುವುದಕ್ಕಾದರೂ ಸ್ವಲ್ಪ ಕೆಲಸ ಮಾಡಿ.


ಸಭಾಪತಿ ಸ್ಥಾನದ ವಿಚಾರವಾಗಿ ಮಾತ್ರ ಬಿಜೆಪಿ ಜೊತೆ ಮೈತ್ರಿ- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಆ ಒಂದು ರಾತ್ರಿ ಬೆಲೆಯೆಷ್ಟು ಎಂದು ಬಹಿರಂಗಪಡಿಸಬಾರದೆ?


ಕೇಂದ್ರ ಸರಕಾರವು ಸದಾ ಭವಿಷ್ಯದ ಭಾರತದ ಬಗ್ಗೆ ಚಿಂತಿಸುತ್ತದೆ - ಪಿಯೂಷ್ ಗೋಯಲ್, ಕೇಂದ್ರ ಸಚಿವ
ಹೌದು, ಭಾರತದ ಭವಿಷ್ಯದ ಬಗ್ಗೆ ಎಲ್ಲರಿಗೂ ಚಿಂತೆ ಹತ್ತಿದೆ.


ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸುವವರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಶಾಸಕರ ಖರೀದಿಯಲ್ಲೂ ಈ ಸೌಲಭ್ಯ ವಿಸ್ತರಿಸಲಾಗುತ್ತದೆಯೇ?


ಕರುನಾಡಿನ ಬಹುದಿನದ ಕನಸು ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ಆಗಿರುವುದು ಸಂತಸ ತಂದಿದೆ - ಪ್ರಭು ಚವ್ಹಾಣ್, ಸಚಿವ
ರೈತರ ಪಾಲಿಗೆ ಕರಾಳ ನಾಡು.


ಕರ್ನಾಟಕದಲ್ಲಿ ಯಡಿಯೂರಪ್ಪರ ನಂತರದ ನಾಯಕರನ್ನು ಕಾಲವೇ ನಿರ್ಧರಿಸುತ್ತದೆ - ಸಿ.ಟಿ.ರವಿ, ಮಾಜಿ ಸಚಿವ
ಕಾಲ ನಿರ್ಧರಿಸುವುದಿಲ್ಲ, ಆರೆಸ್ಸೆಸ್ ನಿರ್ಧರಿಸುತ್ತದೆ.


ಹೆತ್ತ ತಾಯಿ ಕೆಲವು ವರ್ಷ ಹಾಲು ಕುಡಿಸಿದರೆ ಗೋವು ಅನುಗಾಲವೂ ಹಾಲು ಕೊಟ್ಟು ನಮ್ಮನ್ನು ಪೋಷಿಸುತ್ತದೆ -ಆರ್.ಅಶೋಕ್, ಸಚಿವ
ರೈತ ಸಾಕಿ ಬೆಳೆಸಿದರೆ ಮಾತ್ರ ಗೋವು ಹಾಲುಕೊಡುವುದು. ಅವನನ್ನು ಕೊಂದು ಗೋವನ್ನು ಉಳಿಸಲು ಹೊರಟವರು ಸರ್ವನಾಶವಾಗುತ್ತಾರೆ.


ನೂತನ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಕಲಿ ರೈತರು - ಕೆ.ಎಸ್.ಈಶ್ವರಪ್ಪ, ಸಚಿವ
ನಾಲಗೆ, ಕೈಗಳನ್ನು ಕತ್ತರಿಸುವುದೇ ಕೃಷಿಯೆಂದು ತಿಳಿದ ರೈತನ ಹೇಳಿಕೆ.


ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ನಾನು ಮತ್ತು ಬಸವರಾಜ ಹೊರಟ್ಟಿ ಮಂತ್ರಿಯಾಗಿರುತ್ತಿದ್ದರೆ ಸರಕಾರ ಪತನವಾಗಿರುತ್ತಿರಲಿಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಪತನವಾದದ್ದೇ ಒಳ್ಳೆಯದಾಯಿತು ಬಿಡಿ.


ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಪ್ರಸ್ತಾವ ಸರಕಾರದ ಮುಂದಿಲ್ಲ - ಕೆ.ಗೋಪಾಲಯ್ಯ, ಸಚಿವ
ಆನ್‌ಲೈನ್ ಮೂಲಕ ದೇಶವನ್ನು ಮಾರಾಟ ಮಾಡುವುದೊಂದೇ ಉಳಿದಿರುವುದು.


ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು- ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ
ಇನ್ನೂ ಯಾವ ರೀತಿಯ ಅನ್ಯಾಯವಾಗಬೇಕು ಎಂದು ಕಾಯುತ್ತಿದ್ದೀರಿ?


ನಾನು ಸೂಪರ್ ಸಿಎಂ ಅಲ್ಲ, ನಮ್ಮ ತಂದೆಯ ರಕ್ಷಕ -ಬಿ.ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಜೊತೆಗೆ ಖಜಾನೆಯ ಭಕ್ಷಕ.


ಓರ್ವ ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮುಖಂಡ
ಆದರೆ ಭಾರತಕ್ಕೆ ಆ ಬಗ್ಗೆ ಯಾವ ಹೆಮ್ಮೆಯೂ ಇದ್ದಂತಿಲ್ಲ.


ಮಾಡುವ ಕೆಲಸದ ಉದ್ದೇಶ ಒಳ್ಳೆಯದಿದ್ದರೆ ಫಲಿತಾಂಶ ಚೆನ್ನಾಗಿರುತ್ತದೆ - ನರೇಂದ್ರ ಮೋದಿ, ಪ್ರಧಾನಿ
ಫಲಿತಾಂಶ ಚೆನ್ನಾಗಿ ಬರದೇ ಇರುವುದರ ಕಾರಣ ಗೊತ್ತಾಯಿತು ಬಿಡಿ.


ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಲಿದೆ - ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ
ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲ ಎನ್ನುವ ಧೈರ್ಯದಿಂದ ಮಾತನಾಡುತ್ತಿರಬೇಕು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ ತಾನೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಲಿ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನೀವು ಸ್ವಂತ ಬಲದಿಂದ ಒಮ್ಮೆ ಮುಖ್ಯಮಂತ್ರಿಯಾಗಿ ತೋರಿಸಿ.


ಪ್ರಧಾನಿ ನರೇಂದ್ರ ಮೋದಿ ಎಲ್ಲರ ಪ್ರೀತಿ ಪಾತ್ರರಾದ, ಜನಪ್ರಿಯ, ದೂರದೃಷ್ಟಿಯುಳ್ಳ, ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ಅಪ್ರತಿಮ ನಾಯಕ - ಎಂ.ಆರ್.ಶಾ. ಸು.ಕೋ. ನ್ಯಾಯಾಧೀಶ
ಆದರೆ ನ್ಯಾಯಾಲಯ ಮಾತ್ರ ಎಲ್ಲ ಪ್ರೀತಿಯನ್ನು, ಜನಪ್ರಿಯತೆಯನ್ನು, ದೂರದೃಷ್ಟಿಯನ್ನು, ಗಟ್ಟಿ ನಿರ್ಧಾರಗಳನ್ನು ಕಳೆದುಕೊಂಡು ದುರ್ಬಲವಾಗಿರುವುದು ವಿಷಾದನೀಯ.


ನಾವು ಕಟ್ಟಿದ ಸಾಮ್ರಾಜ್ಯವನ್ನು ಉಳಿಸಲು ಮುಂದೆ ನಮ್ಮ ಮಕ್ಕಳು ರಾಜಕೀಯಕ್ಕೆ ಬಂದೇ ಬರುತ್ತಾರೆ - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿರುವುದು ನೀವೇ ಇರಬೇಕು.


ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಸ್ಪರ್ಧಿಸಲು ನಮ್ಮ ಬಳಿ ಹಣವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಹಣಕ್ಕಾಗಿ ಮತ್ತೆ ಬಿಜೆಪಿಯ ಜೊತೆಗೆ ರಾತ್ರಿ ಕಳೆಯುವ ಉದ್ದೇಶವಿದೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...