ಚಿಕ್ಕಮಗಳೂರು: ಫೆ.16 ರಂದು ಮಲ್ನಾಡ್ ಗಲ್ಫ್ ಅಸೋಸಿಯೇಶನ್ ವತಿಯಿಂದ 'ಮಲೆನಾಡ ಸಂಗಮ- 2021'

Update: 2021-02-15 15:51 GMT

ಚಿಕ್ಕಮಗಳೂರು, ಫೆ.15: ಮಲ್ನಾಡ್ ಗಲ್ಫ್ ಅಸೋಸಿಯೇಶನ್ (ಮಲ್ನಾಡ್ ಗಲ್ಫ್ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್. ರಿ) ಇದರ ಜಿಲ್ಲಾ ಸಮಾವೇಶ 'ಮಲೆನಾಡ ಸಂಗಮ- 2021' ಚಿಕ್ಕಮಗಳೂರಿನ ಹೆರಿಟೇಜ್ ಸಮಾವೇಶ ಸಭಾಂಗಣದಲ್ಲಿ ಫೆ.16ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಯೂಸುಫ್ ಹಾಜಿ ಚಿಕ್ಕಮಗಳೂರು ಭಾಗವಹಿಸಲಿದ್ದಾರೆ. ಸಮಿತಿಯ ಟ್ರಸ್ಟಿ ಹಾಗೂ ಎಮ್.ಜಿ.ಟಿ ಕೇಂದ್ರೀಯ ಸಮಿತಿಯ ಗೌರವಾಧ್ಯಕ್ಷ ಬಶೀರ್ ಬಾಳ್ಳುಪೇಟೆ, ಹೆರಿಟೇಜ್ ಕನ್ವೆನ್ಶನ್ ಹಾಲ್ ಮಾಲಕರು ಮತ್ತು ಎಮ್.ಜಿ.ಟಿ ರಿಯಾದ್ ಘಟಕದ ಗೌರವಾಧ್ಯಕ್ಷ ನಿಯಾಝ್ ಅಹಮದ್, ಎಮ್.ಜಿ.ಟಿ ಕೇಂದ್ರೀಯ ಸಮಿತಿ ಸೌದಿ ಅರೇಬಿಯಾ ಟ್ರಸ್ಟಿ ಮತ್ತು ಉಪಾಧ್ಯಕ್ಷ ಸಿರಾಜುದ್ದೀನ್, ಎಮ್.ಜಿ.ಟಿ ಮೂಡಿಗೆರೆ ವಲಯದ ಅಧ್ಯಕ್ಷ ಅಕ್ರಮ್ ಹಾಜಿ, ಎಮ್.ಜಿ.ಟಿ ಶಿವಮೊಗ್ಗ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತಿಕಟ್ಟೆ, ಎಮ್.ಜಿ.ಟಿ ಕೊಡಗು ಜಿಲ್ಲಾ ಅಧ್ಯಕ್ಷ ನೌಶಾದ್ ಜನ್ನತ್, ಎಮ್.ಜಿ.ಟಿ ಬಾಳೆಹೊನ್ನೂರು ವಲಯದ ಅಧ್ಯಕ್ಷ ಅಬ್ದುಲ್ ವಹೀದ್ ಮಾಗುಂಡಿ, ಎಮ್.ಜಿ.ಟಿ ಹಾಸನ ಜಿಲ್ಲಾ ಅಧ್ಯಕ್ಷ ಹಸೈನಾರ್ ಆನೆಮಹಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್, ಚಿಕ್ಕಮಗಳೂರು ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ನಸೀರ್ ಅಹಮದ್, ಎಮ್.ಜಿ.ಟಿ ಶಿವಮೊಗ್ಗ ಸಮತಿಯ ಡಾ. ಬಿ. ಎಂ. ಉಮ್ಮರ್ ಹಾಜಿ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಲ್ನಾಡ್ ಗಲ್ಫ್ ಅಸೋಸಿಯೇಶನ್ (ಮಲ್ನಾಡ್ ಗಲ್ಫ್ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ರಿ. ) ಇದರ ಅಧ್ಯಕ್ಷ ಶರೀಪ್ ಕಳಸ ಅವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News