‘ದಲ್ಲಾಳಿ' ಕೆಲಸ ಮಂತ್ರಿ ಸ್ಥಾನಕ್ಕೆ ಅಪಮಾನ: ರಮೇಶ್ ಜಾರಕಿಹೊಳಿಗೆ ಸಲೀಂ ಅಹ್ಮದ್ ತಿರುಗೇಟು

Update: 2021-02-15 17:35 GMT

ಬೆಂಗಳೂರು, ಫೆ. 15: ಶಾಸಕರ ಖರೀದಿ ಸಂಬಂಧದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ನೀವು ಚುನಾಯಿತ ಜನಪ್ರತಿನಿಧಿಯೆಂಬುದನ್ನು ಮರೆತು ಶಾಸಕರ ಖರೀದಿ ಮಾಡುವ ದಲ್ಲಾಳಿಯಂತೆ ನಡೆದುಕೊಳ್ಳುತ್ತಿರುವುದು ಮಂತ್ರಿ ಸ್ಥಾನಕ್ಕೆ ಮಾಡುತ್ತಿರುವ ಅಪಮಾನ' ಎಂದು ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರ ಅಸಮಾಧಾನದ ಹೇಳಿಕೆಗಳನ್ನು ಹಾಗೂ ಬೆದರಿಕೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಿಮ್ಮ ಸರಕಾರಕ್ಕಿಲ್ಲ. ನಿಮಗೆ ಅಧಿಕಾರದ ಮದವೇರಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುವ ನಿಮ್ಮ ಪ್ರಯತ್ನ ಅದು ತಿರುಕನ ಕನಸಿನಂತೆ' ಎಂದು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News