ಲೇಖಕ ಚ.ಹ.ರಘುನಾಥ್, ಈರಪ್ಪ ಕಂಬಳಿಗೆ ವೀಚಿ ಸಾಹಿತ್ಯ ಪ್ರಶಸ್ತಿ

Update: 2021-02-24 17:39 GMT

ಬೆಂಗಳೂರು, ಫೆ.24: ವೀಚಿ ಸಾಹಿತ್ಯ ಪ್ರತಿಷ್ಠಾನವು ಕೊಡಮಾಡುವ 2020ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಚ.ಹ.ರಘುನಾಥ್ ಹಾಗೂ ಈರಪ್ಪ ಎಂ.ಕಂಬಳಿ ಹಾಗೂ ಉದಯೋನ್ಮುಖ ವೀಚಿ ಸಾಹಿತ್ಯ ಪ್ರಶಸ್ತಿಗೆ ಕವಿ ವಿ.ಎ.ಲಕ್ಷ್ಮಣ್ ಆಯ್ಕೆಯಾಗಿದ್ದಾರೆ.

ಲೇಖಕರಾದ ಚ.ಹ.ರಘುನಾಥ್ ಅವರ ಬೆಳ್ಳಿತೊರೆ(ಸಿನೆಮಾ ಪ್ರಬಂಧಗಳು), ಈರಪ್ಪ ಕಂಬಳಿ ಅವರ ಶೌಚಾಲಯ ತಪಸ್ವಿ ಹಾಗೂ ಇತರ ಪ್ರಬಂಧಗಳು ಹಾಗೂ ವಿ.ಎ.ಲಕ್ಷ್ಮಣ್ ಅವರ ಅಪ್ಪನ ಅಂಗಿ ಕವನ ಸಂಕಲನಕ್ಕೆ ಪ್ರಶಸ್ತಿ ಸಂದಿವೆ. ಪ್ರಶಸ್ತಿಯು 25ಸಾವಿರ ರೂ. ನಗದು ಹಾಗೂ ಉದಯೋನ್ಮುಖ ಪ್ರಶಸ್ತಿಯು 5ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News