ಮಣ್ಣು ತಿಂದವರು ಈಗ ಕಲ್ಲು ತಿನ್ನುತ್ತಿದ್ದಾರೆ: ಕಾಂಗ್ರೆಸ್ ಟೀಕೆ

Update: 2021-02-25 15:19 GMT

ಬೆಂಗಳೂರು, ಫೆ.25: ಹಿಂದೆ ಬಳ್ಳಾರಿಯ ‘ಮಣ್ಣು ತಿಂದರು’ ಈಗ ರಾಜ್ಯಾದ್ಯಂತ ‘ಕಲ್ಲು ತಿನ್ನುತ್ತಿದ್ದಾರೆ’. ರಾಜ್ಯಾದ್ಯಂತ ರಾಜ್ಯ ಬಿಜೆಪಿ ಅಕ್ರಮ ಗಣಿಗಾರಿಕೆಯಿಂದ ಅಮಾಯಕರ ಜೀವ ತೆಗೆಯುತ್ತಿದೆ. ಹಿಂದೆಯೂ ಗಣಿ ಲಾಬಿ ಯಡಿಯೂರಪ್ಪ ಅವರನ್ನ ತಿಪ್ಪರಲಾಗ ಹಾಕಿಸಿತ್ತು. ಈಗಲೂ ಬೆದರಿಸುತ್ತಿದೆ. ನಾನೇನು ಮಾಡಲಾಗುತ್ತದೆ ಎನ್ನುವ ಅಸಹಾಯಕತೆಯಲ್ಲಿದ್ದಾರೆ ಸಿಎಂ ಎಂದು ಕಾಂಗ್ರೆಸ್ ಟ್ವೀಟರ್‍ನಲ್ಲಿ ಟೀಕಿಸಿದೆ.

ರಾಜ್ಯದಲ್ಲಿ ಜಿಲೆಟಿನ್ ಸ್ಫೋಟಕಗಳು ತರಕಾರಿಗಳಿಗಿಂತಲೂ ಸುಲಭದಲ್ಲಿ ದೊರಕುತ್ತಿದೆ. ಎಲ್ಲಿ ಬೇಕೆಂದರಲ್ಲಿ, ಯಾರಿಗೆ ಬೇಕಿದ್ದರೂ ಸ್ಫೋಟಕ ಕೈಗೆ ಸಿಗುತ್ತಿದೆ. ಭಯೋತ್ಪಾದಕರು, ಸಮಾಜಘಾತುಕರ ಕೈಗೆ ಸಿಕ್ಕು ಅನಾಹುತ ಸಂಭವಿಸಿದರೆ ರಾಜ್ಯ ಬಿಜೆಪಿ ಹೊಣೆ. ಕಾನೂನು ಸುವ್ಯವಸ್ಥೆಯಲ್ಲಿ ನೆಲಕಚ್ಚಿದ ಬಸವರಾಜ ಬೊಮ್ಮಾಯಿ ಅವರೇ ಈ ದುರಂತಗಳಿಗೆ ಹೊಣೆಗಾರರು ಎಂದು ಕಾಂಗ್ರೆಸ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News