ಬೈಕ್‍ಗೆ ಮರಳು ತುಂಬಿದ ಲಾರಿ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು

Update: 2021-02-26 18:21 GMT

ಹಾವೇರಿ, ಫೆ.26: ಮರಳು ತುಂಬಿದ ಲಾರಿ ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಮುದೇನೂರು ಬಳಿ ನಡೆದಿದೆ ಎಂದು ವರದಿಯಾಗಿದೆ.

ಮುದೇನೂರು ಗ್ರಾಮದ ಸಿದ್ದಪ್ಪನಾಗೇನಹಳ್ಳಿ(40) ಆತನ ಪತ್ನಿ ಅನುಸೂಯಮ್ಮ(32), ಮಗಳು ವನಿತಾ(11) ಹಾಗೂ ಮತ್ತೊಬ್ಬ ಮಗಳು ಸುನೀತಾ(9) ಮೃತಪಟ್ಟವರು ಎಂದು ತಿಳಿದುಬಂದಿದೆ.

ದುರ್ಗಾದೇವಿ ಜಾತ್ರೆಗೆ ಹೋಗಿದ್ದ ಸಿದ್ದಪ್ಪ ನಾಗೇನಹಳ್ಳಿ ಅವರು ಗುಡ್ಡದಹಳ್ಳಿಯಿಂದ ಗುರುವಾರ ರಾತ್ರಿ ಬೈಕ್‍ನಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನ ಕರೆದುಕೊಂಡು ಊರಿಗೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News