ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿ ಹಣ ಎಗರಿಸಿದ ದುಷ್ಕರ್ಮಿಗಳು !

Update: 2021-02-28 12:57 GMT

ಬೆಂಗಳೂರು, ಫೆ.28: ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಐಡಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಅವರ ಸ್ನೇಹಿತರಿಗೆ ಸಂದೇಶಗಳನ್ನು ರವಾನಿಸಿ ಹಣ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇ-ಮೇಲ್ ಸಂದೇಶದ ಜೊತೆಗೆ ಖಾಸಗಿ ಬ್ಯಾಂಕ್ ಖಾತೆಯ ಮಾಹಿತಿ ಕಳಿಸಿದ್ದಾರೆ. ಇದನ್ನು ಕಂಡು, ಶಂಕರ್ ಬಿದರಿ ಅವರೇ ಇ-ಮೇಲ್ ಮಾಡಿದ್ದಾರೆಂದು ಭಾವಿಸಿ ಅವರ ಸ್ನೇಹಿತರೊಬ್ಬರು ಆ ಬ್ಯಾಂಕ್ ಖಾತೆಗೆ 25 ಸಾವಿರ ರೂ. ಹಣವನ್ನು ಜಮೆ ಮಾಡಿದ್ದಾರೆ.

ಸ್ನೇಹಿತರು 25 ಸಾವಿರ ಹಣ ಜಮೆ ಮಾಡಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಇ-ಮೇಲ್ ಐಡಿ ಹ್ಯಾಕ್ ಆಗಿರುವುದು ಗೊತ್ತಾಗಿದ್ದು, ಶಂಕರ್ ಬಿದರಿ ಅವರು ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದು, ದುಷ್ಕರ್ಮಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News