ಎಸ್ಸಿ ಸಮುದಾಯದವರು ತನಗೆ ಮತ ಹಾಕಲಿಲ್ಲ ಎಂದು ಗಲಾಟೆ ಆರೋಪ: ಗ್ರಾ.ಪಂ.ಸದಸ್ಯ ಪೊಲೀಸ್ ವಶಕ್ಕೆ

Update: 2021-02-28 15:58 GMT

ಮೈಸೂರು,ಫೆ.28: ಎಸ್‍ಸಿ ಸಮುದಾಯದವರು ಚುನಾವಣೆಯಲ್ಲಿ ತನಗೆ ಮತ ಹಾಕಲಿಲ್ಲವೆಂದು ಹಳೇಹೆಗ್ಗುಡಿಲು ಗ್ರಾಮ ಪಂಚಾಯತ್ ಸದಸ್ಯ ಶಿವರಾಜು ಗ್ರಾಮದ ಜನರೊಂದಿಗೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. 

ಘಟನೆ ಸಂಬಂಧ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಈತ ಗ್ರಾಪಂ ಸದಸ್ಯನಾದ ದಿನದಿಂದಲೂ ತನಗೆ ಗ್ರಾಮದ ಎಸ್‍ಸಿ ಜನಾಂಗ ಮತ ಹಾಕಿಲ್ಲ ಎಂದು ನಿತ್ಯವೂ ಗ್ರಾಮದ ಜನರೊಂದಿಗೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಕೂಡ ಇದೇ ರೀತಿ ಗಲಾಟೆ ಮಾಡಿ ಗ್ರಾಮದ ಯೋಗೇಶ್ ಎಂಬ ಯುವಕನನ್ನು ಥಳಿಸಲು ಮುಂದಾಗಿದ್ದಾನೆ. ಈ ವೇಳೆ ಗ್ರಾಮದ ಜನರನ್ನೆಲ್ಲ ಆತನನ್ನು ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಸರಗೂರು ಠಾಣಾ ಪೊಲೀಸರು ಗ್ರಾಪಂ ಸದಸ್ಯನನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News