ನ್ಯಾಯವಾದಿಗಳ ರಕ್ಷಣೆಗೆ ಕಾನೂನು ರಚಿಸಿ: ಸಿದ್ದರಾಮಯ್ಯ ಒತ್ತಾಯ
Update: 2021-02-28 16:11 GMT
ಬೆಂಗಳೂರು, ಫೆ. 28: ಹೊಸಪೇಟೆಯ ನ್ಯಾಯವಾದಿ ವೆಂಕಟೇಶ್ ಅವರ ಕೊಲೆಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ನ್ಯಾಯವಾದಿಗಳ ರಕ್ಷಣೆಗೆ ಕಾನೂನು ರಚಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ರವಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಹೊಸಪೇಟೆ, ಹೈದರಾಬಾದ್ ಸೇರಿದಂತೆ ದೇಶದಾದ್ಯಂತ ನಡೆಯುತ್ತಿರುವ ವಕೀಲರ ಹತ್ಯೆ ಪ್ರಕರಣಗಳು ಕಳವಳಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.
ವೈದ್ಯರ ರಕ್ಷಣೆಗಾಗಿ ಇರುವ ವಿಶೇಷ ಕಾಯ್ದೆಯ ಮಾದರಿಯಲ್ಲಿಯೇ ನ್ಯಾಯವಾದಿಗಳ ರಕ್ಷಣೆಗಾಗಿ ಕಾನೂನು ರಚಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕೆಂದು ಅವರು ಆಗ್ರಹಿಸಿದರು.