ರಾಹುಲ್‌ ಗಾಂಧಿ ಸಂಸದರಾಗಿರುವ ವಯನಾಡ್‌ ನಲ್ಲಿ ಕಾಂಗ್ರೆಸ್ ನ ನಾಲ್ವರು ಪ್ರಮುಖ ನಾಯಕರಿಂದ ರಾಜೀನಾಮೆ

Update: 2021-03-04 07:30 GMT

ತಿರುವನಂತಪುರ: ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ  ಲೋಕಸಭಾ ಕ್ಷೇತ್ರವಾಗಿರುವ ವಯನಾಡ್ ಜಿಲ್ಲೆಯಲ್ಲಿ ಪಕ್ಷದ ನಾಲ್ವರು ಪ್ರಮುಖ ನಾಲ್ವರು ನಾಯಕರು ರಾಜೀನಾಮೆ ಸಲ್ಲಿಸಿದ್ದು, ಕೇರಳದಲ್ಲಿ ಚುನಾವಣೆ ಹತ್ತಿರವಾಗಿರುವ ವೇಳೆಗೆ ಕಾಂಗ್ರೆಸ್ ಪಕ್ಷ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಸದಸ್ಯ ಕೆ.ಕೆ. ವಿಶ್ವನಾಥನ್, ಕೆಪಿಸಿಸಿ ಕಾರ್ಯದರ್ಶಿ ಎಂಎಸ್ ವಿಶ್ವನಾಥನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಅನಿಲ್ ಕುಮಾರ್ ಹಾಗೂ ಮಹಿಳಾ ಕಾಂಗ್ರೆಸ್ ನಾಯಕಿ ಸುಜಯಾ ವೇಣುಗೋಪಾಲ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವದ ವೈಫಲ್ಯ ಹಾಗೂ ಕೆಪಿಸಿಸಿ ನಾಯಕತ್ವದ ನಿರ್ಲಕ್ಷ್ಯಕ್ಕಾಗಿ ಕೆಪಿಸಿಸಿ ಕಾರ್ಯದರ್ಶಿ  ಹುದ್ದೆಗೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡುತ್ತಿರುವೆ ಎಂದು ಎಂಎಸ್ ವಿಶ್ವನಾಥನ್ ಹೇಳಿದ್ದಾರೆ.

ಬಿಕ್ಕಟ್ಟನ್ನು ಬಗೆಹರಿಸಲುಇ ಕಾಂಗ್ರೆಸ್ ಪಕ್ಷ ಕೆ.ಸುಧಾಕರನ್ ಸಹಿತ ಹಲವು ಹಿರಿಯ ನಾಯಕರನ್ನು ನಿಯೋಜಿಸಿದೆ. ಸುಧಾಕರನ್ ಗುರುವಾರ ಡಿಸಿಸಿ ಕಚೇರಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News