ವೈಚಾರಿಕ ಚರ್ಚೆಗೆ ಅಡ್ಡಿಪಡಿಸಲು ಕಾಂಗ್ರೆಸ್ನ ಅತಿರೇಕವೇ?: ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪ್ರಶ್ನೆ
Update: 2021-03-04 18:13 GMT
ಬೆಂಗಳೂರು, ಮಾ. 4: ‘ಜನರಿಂದ ಚುನಾಯಿತರಾದ ಶಾಸಕರೊಬ್ಬರು ಎಲ್ಲ ಘನತೆಯನ್ನು ಮೀರಿ ಅಂಗಿ ಬಿಚ್ಚಿ ಪ್ರತಿಭಟಿಸಿರುವುದು ನಿಜಕ್ಕೂ ಖಂಡನೀಯ. ಇದು ಪ್ರಚಾರದ ಗಿಮಿಕ್ಕೋ? ಅಥವಾ ವೈಚಾರಿಕ ಚರ್ಚೆಗೆ ಅಡ್ಡಿಪಡಿಸಲು ಕಾಂಗ್ರೆಸ್ನ ಅತಿರೇಕವೇ? ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಒಂದು ರಾಷ್ಟ್ರ ಒಂದು ಚುನಾವಣೆ' ವಿಷಯಕ್ಕೆ ಸಂಬಂಧಿಸಿದ ವಿಧಾನಸಭೆಯ ಚರ್ಚೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಪಕ್ಷ ಸಿದ್ಧವಿಲ್ಲ ಎಂಬುದು ವಿಪರ್ಯಾಸ. ಚರ್ಚೆ ಇಲ್ಲದೆ ದೇಶದಲ್ಲಿ ಯಾವ ಪ್ರಸ್ತಾಪವೂ ಮುಂದುವರೆಯಲು ಸಾಧ್ಯವಿಲ್ಲ. ಸಭಾಪತಿಗಳನ್ನು ಪ್ರಶ್ನಿಸಿ ಸದನದ ಘನತೆಗೆ ಕುತ್ತು ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.