ವಿಜಯಪುರ ಮೂಲದ ಯೋಧ ದಿಲ್ಲಿಯಲ್ಲಿ ಆತ್ಮಹತ್ಯೆ

Update: 2021-03-07 17:52 GMT

ಹೊಸದಿಲ್ಲಿ, ಮಾ.7: ಕರ್ತವ್ಯ ನಿರತ ವಿಜಯಪುರ ಜಿಲ್ಲೆಯ ಯೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರಿನ ನಿವಾಸಿ ಯೋಧ ಪರಸಪ್ಪ ಚಿಲಕನಹಳ್ಳಿ(25) ದಿಲ್ಲಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮದ್ರಾಸ್ ರೆಜಿಮೆಂಟ್​ನ 27ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪರಸಪ್ಪ ಚಿಲಕನಹಳ್ಳಿ ತನ್ನ ಪತ್ನಿ ಜತೆ ಹೊಸದಿಲ್ಲಿ ವಾಸವಾಗಿದ್ದರು. ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News