ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್: ಕಾಂಗ್ರೆಸ್ ಟೀಕೆ
Update: 2021-03-08 09:54 GMT
ಬೆಂಗಳೂರು, ಮಾ.8: ರಾಜ್ಯ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಅವರು ಇಂದು ರಾಜ್ಯ ಬಜೆಟ್ 2021 ಮಂಡಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ 'ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್' ಎಂದು ಟೀಕಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್" #ಬೋಗಸ್ ಬಜೆಟ್. ಬಿಜೆಪಿಯ ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ # ಬೋಗಸ್ ಬಜೆಟ್ ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್" ಎಂದು ಕುಟುಕಿದೆ.
'@BJP4Karnataka ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು.
— Karnataka Congress (@INCKarnataka) March 8, 2021
ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್"