ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್: ಕಾಂಗ್ರೆಸ್ ಟೀಕೆ

Update: 2021-03-08 09:54 GMT

ಬೆಂಗಳೂರು, ಮಾ.8: ರಾಜ್ಯ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಅವರು ಇಂದು ರಾಜ್ಯ ಬಜೆಟ್ 2021 ಮಂಡಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ 'ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್' ಎಂದು ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್" #ಬೋಗಸ್ ಬಜೆಟ್. ಬಿಜೆಪಿಯ ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ # ಬೋಗಸ್ ಬಜೆಟ್ ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್" ಎಂದು ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News