ಜೀವ ಬೆದರಿಕೆ ಆರೋಪ ಪ್ರಕರಣ: ನಟ ಶಿವರಾಜ್ ಕುಮಾರ್ ಗೆ ಗನ್‍ಮ್ಯಾನ್‍, ಮನೆಗೆ ಭದ್ರತೆ

Update: 2021-03-22 12:25 GMT

ಬೆಂಗಳೂರು, ಮಾ.22: ನಟ ಡಾ.ಶಿವರಾಜ್‍ಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರ ಹೇಳಿಕೆ ಸಂಬಂಧ ರಾಜ್ಯ ಸರಕಾರವು ಶಿವರಾಜ್ ಕುಮಾರ್ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎರಡು ಪಾಳಯದಲ್ಲಿ ನಾಲ್ಕು ಪೊಲೀಸರು ಹಾಗೂ ಗನ್‍ಮ್ಯಾನ್‍ಗಳನ್ನು ನಿಯೋಜನೆ ಮಾಡಿದೆ. ನಟ ಶಿವರಾಜ್ ಕುಮಾರ್ ಮನೆಯ ಬಳಿ ಪೊಲೀಸರು ಕಾವಲಿದ್ದು, ಭದ್ರತೆ ನೀಡುತ್ತಿದ್ದಾರೆ.

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ನನಗೆ, ಹಿರಿಯ ಪತ್ರಕರ್ತರೊಬ್ಬರಿಗೆ ಹಾಗೂ ನಟ ಶಿವರಾಜ್ ಕುಮಾರ್ ಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡಿದ್ದು, ಈ ಸಂಬಂಧ ಪತ್ರವೊಂದು ಬಂದಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News