ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 26 ಸೋಂಕಿತರು ಮೃತ್ಯು, 4,225 ಮಂದಿಗೆ ಪಾಸಿಟಿವ್

Update: 2021-03-31 15:33 GMT

ಬೆಂಗಳೂರು, ಮಾ.30: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ದಿನೇ ದಿನೇ ಕೋವಿಡ್ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಬುಧವಾರ 26 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 4,225 ಹೊಸ ಪ್ರಕರಣಗಳು ದೃಢಪಟ್ಟಿದ್ದು, 1,492 ಮಂದಿ ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,97,004ಕ್ಕೆ ತಲುಪಿದ್ದು, ಇಲ್ಲಿಯವರೆಗೂ 12,567 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ ಇಂದಿನ(ಮಾ.31) ಸೋಂಕಿತರನ್ನು ಒಳಗೊಂಡಂತೆ 28,248 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಸಾವು: ಬೆಂಗಳೂರು ನಗರವೊಂದರಲ್ಲಿಯೇ ಇಂದು 18 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕಲಬುರಗಿ-2, ತುಮಕೂರು-2 ಹಾಗೂ ಚಿಕ್ಕಮಗಳೂರು, ಕೋಲಾರ, ಉಡುಪಿ, ಉತ್ತರ ಕನ್ನಡದಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದ್ದು, ಒಟ್ಟು ರಾಜ್ಯದಲ್ಲಿ ಬುಧವಾರ 26 ಸೋಂಕಿತರು ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಸೋಂಕಿತರು: ಬಾಗಲಕೋಟೆ-8, ಬಳ್ಳಾರಿ-68, ಬೆಳಗಾವಿ-39, ಬೆಂಗಳೂರು ಗ್ರಾಮಾಂತರ-80, ಬೆಂಗಳೂರು ನಗರ-2,928, ಬೀದರ್-159, ಚಾಮರಾಜನಗರ-3, ಚಿಕ್ಕಬಳ್ಳಾಪುರ-11, ಚಿಕ್ಕಮಗಳೂರು-16, ಚಿತ್ರದುರ್ಗ-12, ದಕ್ಷಿಣ ಕನ್ನಡ-43, ದಾವಣಗೆರೆ-16, ಧಾರವಾಡ-62, ಗದಗ-14, ಹಾಸನ-74, ಹಾವೇರಿ-1, ಕಲಬುರಗಿ-137, ಕೊಡಗು-18, ಕೋಲಾರ-20, ಕೊಪ್ಪಳ-20, ಮಂಡ್ಯ-39, ಮೈಸೂರು-142, ರಾಯಚೂರು-22, ರಾಮನಗರ-6, ಶಿವಮೊಗ್ಗ-31, ತುಮಕೂರು-138, ಉಡುಪಿ-56, ಉತ್ತರ ಕನ್ನಡ-37, ವಿಜಯಪುರ-15, ಯಾದಗಿರಿ-10 ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ 2,928 ಕೋವಿಡ್ ಪ್ರಕರಣ ದೃಢ

ಬೆಂಗಳೂರಿನಲ್ಲಿ ಬುಧವಾರ 2,928 ಮಂದಿ ಕೊರೋನ ಸೋಂಕು ದೃಢಪಟ್ಟಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 879 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಂದಿನವರೆಗೆ(ಬುಧವಾರ) 19,613 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ನಗರದ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News