ಪ್ರೀತಿ ನಿರಾಕರಿಸಿದ ಯುವತಿಗೆ ತಾಳಿ ಕಟ್ಟಲು ಯತ್ನಿಸಿ, ಚೂರಿ ಇರಿದು ಕೊಲೆಗೈದ ಯುವಕ

Update: 2021-04-05 17:32 GMT
ಕೊಲೆ ಆರೋಪಿ ಈರಣ್ಣ

ತುಮಕೂರು, ಎ.5: ಬಹುದಿನಗಳಿಂದ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದರೂ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸಿರಾ ತಾಲೂಕಿನ ದೊಡ್ಡಗುಳದಲ್ಲಿ ನಡೆದಿದೆ.

ಸಿರಾ ತಾಲೂಕಿನ ದೊಡ್ಡಗುಳ ಸಮಿಪದ ರತ್ನಸಂದ್ರ ಗೊಲ್ಲರಹಟ್ಟಿ ನಿವಾಸಿ ಕಾವ್ಯ ಎಂಬಾಕೆಯೇ ಕೊಲೆಯಾಗಿರುವ ಯುವತಿ. ಈಕೆಯನ್ನು ಕೊಲೆ ಮಾಡಿರುವ ಯುವಕ ಈರಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ದೊಡ್ಡಗುಳ ಗ್ರಾಮದ ಯುವಕ ಈರಣ್ಣ ಅದೇ ಗ್ರಾಮದ ಗೊಲ್ಲರಹಟ್ಟಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದನು ಎನ್ನಲಾಗಿದೆ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು.

ಇಂದು ಯುವತಿ ಕಾಲೇಜಿಗೆ ಹೋಗುವ ಸಮಯದಲ್ಲಿ ಈರಣ್ಣ ಅಡ್ಡಗಟ್ಟಿ ತಾಳಿ ಕಟ್ಟಲು ಯತ್ನಿಸಿದ್ದು, ಇದಕ್ಕೆ ಯುವತಿ ಒಪ್ಪದೆ ವಿರೋಧ ವ್ಯಕ್ತಪಡಿಸಿದರಿಂದ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಈರಣ್ಣನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News