ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಲಸೆ ನಾಯಕ: ಬಿಜೆಪಿ ವ್ಯಂಗ್ಯ

Update: 2021-04-08 17:15 GMT

ಬೆಂಗಳೂರು, ಎ.8: ಮಾನ್ಯ ಸಿದ್ದರಾಮಯ್ಯ ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿ ಬೇಕೇ? ಸರಕಾರವೇ ಸರಿ ಇಲ್ಲ- ಕಾಗೋಡು, ಕಾಂಗ್ರೆಸ್ ಮುಗಿಸುತ್ತಿದ್ದೀರಿ- ಜನಾರ್ದನ ಪೂಜಾರಿ, ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್, ಈ ಧ್ವನಿಗಳು ನಿಮ್ಮ ಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ? ವಲಸೆ ನಾಯಕ ಸಿದ್ದರಾಮಯ್ಯ ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಮಾನ್ಯ ಸಿದ್ದರಾಮಯ್ಯ, ನೀವು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮ್ಮನ್ನು ಹೋದಲ್ಲಿ ಬಂದಲ್ಲಿ ಟೀಕೆ ಮಾಡುತ್ತಿದ್ದರು. ಅವರನ್ನು ನಿಯಂತ್ರಿಸಲಾಗದ ನೀವು ಈಗ ಬಿಜೆಪಿ ಪಕ್ಷದ ಬಗ್ಗೆ ಚಿಂತಿಸುವುದು ಹಾಸ್ಯದ ವಿಚಾರ. ಕಾಂಗ್ರೆಸ್ ಪಕ್ಷದಲ್ಲಿ ನೀವೊಬ್ಬ ವಲಸೆ ನಾಯಕ ಸಿದ್ದರಾಮಯ್ಯ ಅಷ್ಟೇ ಎಂದು ಬಿಜೆಪಿ ಟೀಕಿಸಿದೆ.

ಲಸಿಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಮತಿಭ್ರಮಣೆಯಾಗಿದೆ. ಮೋದಿ ಸರಕಾರ ದೇಶದಲ್ಲಿ ನಿತ್ಯ 34 ಲಕ್ಷ ಡೋಸ್ ಲಸಿಕೆ ವಿತರಿಸುತ್ತಿದೆ. ಇದುವರೆಗೆ 9 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಲಸಿಕೆ ಕೊರತೆ ನಿಜವಾಗಿದ್ದರೆ ಸಿದ್ದರಾಮಯ್ಯ ಲಸಿಕೆ ಪಡೆಯಲು ಸಾಧ್ಯವಿತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಲಸಿಕೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಬದಲು ದೇಶದ ಜನರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಗಾಂಧಿ ಕುಟುಂಬದ ಯಾರೂ ಲಸಿಕೆ ತೆಗೆದುಕೊಂಡಿಲ್ಲವೇಕೆ? ಭಾರತೀಯ ಲಸಿಕೆಯಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಅವರಿಗೆ ನಂಬಿಕೆ ಇಲ್ಲವೇ? ಇಟಲಿಯ ಲಸಿಕೆಗಾಗಿ ಗಾಂಧಿ ಕುಟುಂಬ ಕಾಯುತ್ತಿದೆಯೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News