ಕೆಲಸಕ್ಕೆ ಹಾಜರಾಗುವ ನೌಕರರಿಗೆ ಮಾತ್ರ ಸಂಬಳ: ಕೆಎಸ್‌ಆರ್‌ಟಿಸಿ ಡಿಸಿ ವೀರೇಶ್

Update: 2021-04-11 18:23 GMT

ಚಿಕ್ಕಮಗಳೂರು, ಎ.11: ಸರಕಾರಿ ಸಾರಿಗೆ ನಿಗಮದ ನೌಕರರ ಪೈಕಿ ಕೆಲಸಕ್ಕೆ ಹಾಜರಾಗಿರುವ ಸಿಬ್ಬಂದಿಗೆ ಮಾತ್ರ ಸಂಬಳ ನೀಡುವುದಾಗಿ ಇಲ್ಲಿನ ಸಾರಿಗೆ ವಿಭಾಗದ ಡಿಸಿ ಎಚ್.ಟಿ.ವೀರೇಶ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮದ ನೌಕರರ ಪೈಕಿ ಕೆಲಸಕ್ಕೆ ಹಾಜರಾಗಿರುವ ನೌಕರರಿಗೆ ಸೋಮವಾರ ಸಂಬಳ ನೀಡಲು ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿರುವ 120 ನೌಕರರಿಗೆ ಎ.12ರಂದು ಸೋಮವಾರ ವೇತನ ನೀಡಲಾಗುವುದು. ಈಗಾಗಲೇ ತಾಂತ್ರಿಕ ವಿಭಾಗದವರು ಮತ್ತು ಆಡಳಿತ ವಿಭಾಗದ ಸಿಬ್ಬಂದಿಗೆ ವೇತನ ನೀಡಲಾಗಿದ್ದು, ಚಾಲಕರು ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಸೋಮವಾರ ಕೆಲಸಕ್ಕೆ ಹಾಜರಾಗುವ ಕಂಡಕ್ಟರ್, ನಿರ್ವಾಹಕರಿಗೂ ಸಂಬಳ ನೀಡಲಾಗುವುದು ಎಂದು ವೀರೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News