ಚಾಮರಾಜನಗರ: ಈಜಲು ಹೋದ ವಿದ್ಯಾರ್ಥಿ ನೀರುಪಾಲು

Update: 2021-04-14 13:50 GMT

ಚಾಮರಾಜನಗರ: ಯುಗಾದಿ ವರ್ಷದೊಡಕಿನಂದು ಬಣ್ಣದಾಟ ಆಡಿ ಬಣ್ಣ ತೊಳೆದುಕೊಳ್ಳಲು ಈಜಲು ಹೋದ ವೇಳೆ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಕೆರೆಯಲ್ಲಿ ನಡೆದಿದೆ.

ಕೊಡಸೋಗೆ ಗ್ರಾಮದ ಮಹೇಶ್ ಎಂಬವರ ಮಗ ಚಂದು ಮೃತ ದುರ್ದೈವಿ. ಈತ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಯುಗಾದಿ ವರ್ಷದೊಡಕಿನ ಪ್ರಯುಕ್ತ ಬಣ್ಣ ಎರಚಾಡಿಕೊಂಡು ಸಂಭ್ರಮಿಸಿ ಬಣ್ಣ ತೊಳೆಯಲು ಮೂವರು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾರೆ. ಚಂದು ಕಾಲುಜಾರಿ ಆಳಕ್ಕೆ ಹೋಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News