2 ಕಳವು ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು: 2 ಲಾರಿ, 13 ಬೈಕ್ ಸಹಿತ ನಾಲ್ವರ ಬಂಧನ

Update: 2021-04-15 09:36 GMT

ವಿಜಯಪುರ, ಎ.15: ಎರಡು ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ವಿಜಯಪುರ ಪೊಲೀಸರು ಎರಡು ಲಾರಿ, 13 ಬೈಕ್ ಗಳ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಎಸ್ಪಿ ಅನುಪಮ್ ಅಗರವಾಲ್, ಗುಮ್ಮಟನಗರಿಯ ಬಡಿ ಕಮಾನ್ ಹತ್ತಿರದ ನಿಲ್ಲಿಸಿದ ಎರಡು ಲಾರಿ ಕಳ್ಳತನ‌ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಗೋಳಗುಮ್ಮಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.

ನಗರದ ಅಸಾರಗಲ್ಲಿ ನಿವಾಸಿ ಮೆಹಬೂಬ್ ಹುಸೇನ್ ಹವಾಲ್ದಾರ್ ಹಾಗೂ ಕಲಬುರಗಿ ಜಿಲ್ಲೆಯ ಬಸವೇಶ್ವರ ಕಾಲನಿ ನಿವಾಸಿ ಮುಹಮ್ಮದ್ ಆಸಿಫ್ ಶೇಖ್ ಬಂಧಿತ ಆರೋಪಿಗಳು. ಬಂಧಿತರಿಂದ 7.25 ಲಕ್ಷ ರೂ. ಮೌಲ್ಯದ ಎರಡು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರ.

ಅದೇರೀತಿ ಜಿಲ್ಲಾದ್ಯಂತ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 7.50 ಲ್ಷ ರೂ. ಮೌಲ್ಯದ ಒಟ್ಟು 13 ಬೈಕ್ ಗಳನ್ನು ಗೋಳಗುಮ್ಮಟ್ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದರು.

 ಗಾಂಧಿ ಸದಾಶಿವ ಎಮ್ಮೆ ಹಾಗೂ ಗಂಗಾಧರ ತುಕಾರಾಮ್ ಬಗಲಿ ಬಂಧಿತ ಆರೋಪಿಗಳು.

  ಎ ಎರಡು ಕಾರ್ಯಾಚರಣೆ ನಡೆಸಿದ ಗೋಳಗುಮ್ಮಟ್ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಅಗರವಾಲ್ ಅವರು ಪೊಲೀಸರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News