ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯ ಕೊಲೆ: ಆರೋಪಿ ಬಂಧನ

Update: 2021-04-17 17:48 GMT

ಶಿವಮೊಗ್ಗ,ಎ.17: ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪಿಯನ್ನು ಹೊಳೆಹೂನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಣಾಯಕಪುರದ ಚೌಡಪ್ಪ(27) ಬಂಧಿತ ಆರೋಪಿ. ಈತ ಎ.12ರಂದು ಅದೇ ಗ್ರಾಮದ ಬಸಪ್ಪ (54) ಎಂಬವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.

ಇವರಿಬ್ಬರೂ ಸಂಬಂಧಿಕರಾಗಿದ್ದು ಮದ್ಯ ಸೇವಿಸಿ ಮನೆಗೆ ಹಿಂದಿರುಗುವಾಗ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಕುಪಿತಗೊಂಡ ಚೌಡಪ್ಪ ಕಲ್ಲಿನಿಂದ ಬಸಪ್ಪನ ಮೇಲೆ ಹಲ್ಲೆಗೈದಿದ್ದ ಎಂದು ಆರೋಪಿಸಲಾಗಿದೆ.

ಸಿಪಿಐ ಇ.ಒ ಮಂಜುನಾಥ,ಪಿಎಸೈ ಎಸ್.ಸುರೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News