ದೇಶ ಮುನ್ನಡೆಸುವ ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2021-04-20 11:41 GMT

ಬೆಂಗಳೂರು, ಎ. 20: `ದೇಶವನ್ನು ಮುನ್ನಡೆಸುವ ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಅವರು, 'ಇಡೀ ದೇಶ ಕೊರೋನ ವೈರಸ್ ಸೋಂಕಿನ ದಾವನಲದಲ್ಲಿ ಉರಿಯುತ್ತಿರುವಾಗ ಚುನಾವಣಾ ಭಾಷಣ ಮಾಡುತ್ತಾ ತಿರುಗಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆಯೊಳಗಿನ ಆತ್ಮಸಾಕ್ಷಿ ಕುಟುಕುವುದಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News