×
Ad

ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಸುಖದೇವ ಆಯ್ಕೆ

Update: 2021-04-24 22:51 IST

ಬೆಂಗಳೂರು, ಎ. 24: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯು ಇತ್ತೀಚೆಗೆ ನಡೆಸಿದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಉಪಾಧ್ಯಕ್ಷರಾಗಿ ಎಚ್.ಸುಖದೇವ, ಮಂಜುನಾಥ್ ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ತಾಯ್‍ರಾಜ್ ಮರೀಚಿ ತಾಳ್- ಕಲಬುರಗಿ ವಿಭಾಗೀಯ ಸಮಿತಿ ಸಂಚಾಲಕ, ಶಿಲ್ಪಾ-ಮಹಿಳಾ ವಿಭಾಗದ ಸಂಚಾಲಕಿ, ಲೋಕೇಶಪ್ಪ ಎಂ.ಟಿ.-ಮೈಸೂರು ವಿಭಾಗೀಯ ಸಂಚಾಲಕ ಹಾಗೂ ಕೆ.ಎಸ್.ಪುಷ್ಪಲತಾ ಅವರನ್ನು ಮಹಿಳಾ ವಿಭಾಗದ ಸಹ ಸಂಚಾಲಕಿಯನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News