ಮಡಿಕೇರಿ: ಕಾಂಗ್ರೆಸ್ ಪಕ್ಷದಿಂದ 8 ಮಂದಿ ಅಮಾನತು
ಮಡಿಕೇರಿ: ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಾಗೂ ಹುದ್ದೆಗಳಿಂದ 8 ಮಂದಿಯನ್ನು ಮುಂದಿನ 6 ವರ್ಷಗಳ ಕಾಲ ಕೆಪಿಸಿಸಿ ಸೂಚನೆಯಂತೆ ಅಮಾನತುಗೊಳಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 2ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೋಹನ್ ಹಾಗೂ ಇವರಿಗೆ ಬೆಂಬಲ ಸೂಚಿಸಿರುವ ಮಹಮ್ಮದ್ ಹಯಾತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನಿಯಮಬಾಹಿರವಾಗಿ ನಡೆದುಕೊಂಡ ಕೆ.ಎಂ.ವೆಂಕಟೇಶ್, ವಾರ್ಡ್ ಸಂಖ್ಯೆ 11 ರ ಸ್ವತಂತ್ರ ಅಭ್ಯರ್ಥಿ ತಜಸಂ, ವಾರ್ಡ್ ಸಂಖ್ಯೆ 19ರ ಸ್ವತಂತ್ರ ಅಭ್ಯರ್ಥಿ ಸುನಿಲ್ ನಂಜಪ್ಪ, ವಾರ್ಡ್ ಸಂಖ್ಯೆ 22ರ ಸ್ವತಂತ್ರ ಅಭ್ಯರ್ಥಿ ಬೆನೆಡಿಕ್ಟ್ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಗಿಲ್ಬರ್ಟ್ ಲೋಬೋ ಮತ್ತು ವಾರ್ಡ್ ಸಂಖ್ಯೆ 23ರ ಸ್ವತಂತ್ರ ಅಭ್ಯರ್ಥಿ ಹೆಚ್.ಕೆ.ಪ್ರೇಮ ಅವರುಗಳನ್ನು ಅಮಾನತುಗೊಳಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.