ನೂತನ ಸ್ಮಶಾನ ಸ್ಥಳದ ಕಾಮಗಾರಿ ಪರಿಶೀಲಿಸಿದ ಕಂದಾಯ ಸಚಿವ ಆರ್.ಅಶೋಕ್
Update: 2021-04-25 16:37 GMT
ಬೆಂಗಳೂರು, ಎ. 25: ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಚಿತಾಗಾರಗಳ ಮೇಲಿನ ಒತ್ತಡ ತಗ್ಗಿಸಲು ಕುರುಬರಹಳ್ಳಿ ಗ್ರಾಮದ ತಾವರಕೆರೆಯಲ್ಲಿರುವ ನೂತನ ಚಿತಾಗಾರ ವ್ಯವಸ್ಥೆಯನ್ನು ಕಂದಾಯ ಸಚಿವ ಆರ್.ಅಶೋಕ್ ಪರಿಶೀಲಿಸಿದರು.
ರವಿವಾರ ಅಲ್ಲಿನ ಪ್ರತಿ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದ ಸಚಿವ ಅಶೋಕ್, ಕೆಲಸಗಾರರಿಗೆ ಶೀಘ್ರದಲ್ಲಿ ಆದ್ಯತೆಯ ಮೇರೆಗೆ ಎಲ್ಲ ಕಾರ್ಯಗಳನ್ನ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್, `ಈ ನೂತನ ಸ್ಮಶಾನದಿಂದಾಗಿ ನಗರದ ಚಿತಾಗಾರದ ಮುಂದೆ ಸಾಲು, ಸಾಲಾಗಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಕಡಿಮೆಯಾಗಲಿದೆ. ನಮ್ಮ ಸರಕಾರ ಕೋವಿಡ್ ಸೋಂಕಿತರ ಆಸ್ಪತ್ರೆ, ಚಿಕಿತ್ಸೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಿದೆ' ಎಂದು ಹೇಳಿದರು.