ಕೋವಿಡ್ ಸಂತ್ರಸ್ತರನ್ನು ಹಣಕ್ಕಾಗಿ ಪೀಡಿಸಬೇಡಿ: ನಟ ಜಗ್ಗೇಶ್

Update: 2021-04-25 16:43 GMT

ಬೆಂಗಳೂರು, ಎ.25: ಕೋವಿಡ್ ಸೋಂಕಿತ ಕುಟುಂಬಸ್ಥರಿಂದ ಆಸ್ಪತ್ರೆಗಳು, ಆ್ಯಂಬುಲೆನ್ಸ್ ಹಾಗೂ ಚಿತಾಗಾರದವರು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಬೇಸರ ತರಿಸಿದೆ. ಯಾರನ್ನೂ ಹಣಕ್ಕಾಗಿ ಸತಾಯಿಸಕೂಡದೆಂದು ಹಿರಿಯ ನಟ ಜಗ್ಗೇಶ್ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಸಂತ್ರಸ್ತರು ಮಾಧ್ಯಮಗಳ ಮೂಲಕ ಆಸ್ಪತ್ರೆ, ಆ್ಯಂಬುಲೆನ್ಸ್ ಹಾಗೂ ಚಿತಾಗಾರಗಳಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿ ಸಂಕಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆ, ಆ್ಯಂಬುಲೆನ್ಸ್, ಮೆಡಿಕಲ್ ಶಾಪ್, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ. ನೊಂದವರಿಗೆ ಭುಜ ಕೊಟ್ಟು ಸಹಾಯ ಮಾಡಿ. ಸತ್ತರೆ ಹಣ ಬರುವುದಿಲ್ಲ. ಪಾಪ-ಪುಣ್ಯ ಮಾತ್ರ ನಮ್ಮ ಹಿಂದೆ ಬರುವುದು. ಆ ದೇವರು ಎಲ್ಲವನ್ನು ನೋಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News