ಕೋವಿಡ್19: ರಾಜ್ಯದಲ್ಲಿ 14 ಲಕ್ಷಕ್ಕೆ ಏರಿದ ಸೋಂಕು ಪ್ರಕರಣ; ಒಂದೇ ದಿನ 180 ಸಾವು

Update: 2021-04-27 16:27 GMT

ಬೆಂಗಳೂರು, ಎ.27: ರಾಜ್ಯದಲ್ಲಿ ಮಂಗಳವಾರದಂದು 31,830 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 180 ಜನರು ಸೋಂಕಿಗೆ ಬಲಿಯಾಗಿದ್ದು, 10,793 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 14,00,775ಕ್ಕೆ ತಲುಪಿದ್ದು, 2,063 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 14,807ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 3,018,99ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

180 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 18, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 97, ಬೀದರ್ 5, ಚಾಮರಾಜನಗರ 2, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 3, ದಾವಣಗೆರೆ 1, ಧಾರವಾಡ 5, ಹಾಸನ 5, ಹಾವೇರಿ 3, ಕಲಬುರಗಿ 7, ಕೋಲಾರ 2, ಮೈಸೂರು 9, ರಾಯಚೂರು 1, ರಾಮನಗರ 6, ಶಿವಮೊಗ್ಗ 2, ತುಮಕೂರು 3, ಉತ್ತರ ಕನ್ನಡ 1, ವಿಜಯಪುರ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 31,830 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 283, ಬಳ್ಳಾರಿ 907, ಬೆಳಗಾವಿ 219, ಬೆಂಗಳೂರು ಗ್ರಾಮಾಂತರ 599, ಬೆಂಗಳೂರು ನಗರ 17,550, ಬೀದರ್ 328, ಚಾಮರಾಜನಗರ 212, ಚಿಕ್ಕಬಳ್ಳಾಪುರ 544, ಚಿಕ್ಕಮಗಳೂರು 275, ಚಿತ್ರದುರ್ಗ 145, ದಕ್ಷಿಣ ಕನ್ನಡ 486, ದಾವಣಗೆರೆ 300, ಧಾರವಾಡ 423, ಗದಗ 119, ಹಾಸನ 503, ಹಾವೇರಿ 99, ಕಲಬುರಗಿ 772, ಕೊಡಗು 373, ಕೋಲಾರ 548, ಕೊಪ್ಪಳ 382, ಮಂಡ್ಯ 737, ಮೈಸೂರು 2,042, ರಾಯಚೂರು 736, ರಾಮನಗರ 169, ಶಿವಮೊಗ್ಗ 256, ತುಮಕೂರು 1,196, ಉಡುಪಿ 477, ಉತ್ತರ ಕನ್ನಡ 205, ವಿಜಯಪುರ 531, ಯಾದಗಿರಿ ಜಿಲ್ಲೆಯಲ್ಲಿ 414 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 97 ಜನರು ಸಾವು

ರಾಜಧಾನಿಯಲ್ಲಿ ಮಂಗಳವಾರದಂದು 17,550 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 97 ಜನರು ಮೃತಪಟ್ಟಿದ್ದಾರೆ. 3,899 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 6,87,751 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 6,002 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,75,525 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News