ರಾಜ್ಯದಲ್ಲಿ ನಿಲ್ಲದ ಕೋವಿಡ್ ಆರ್ಭಟ: ಇಂದು 39 ಸಾವಿರ ಪ್ರಕರಣಗಳು ಪಾಸಿಟಿವ್, 229 ಮಂದಿ ಸಾವು

Update: 2021-04-28 15:10 GMT

ಬೆಂಗಳೂರು, ಎ.28: ರಾಜ್ಯದಲ್ಲಿ ಬುಧವಾರದಂದು 39,047 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 229 ಜನರು ಸೋಂಕಿಗೆ ಬಲಿಯಾಗಿದ್ದು, 11,833 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 14,39,822ಕ್ಕೆ ತಲುಪಿದ್ದು, 2,192 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 15,036ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 3,28,884ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

229 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 8, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 137, ಬೀದರ್ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 5, ಚಿತ್ರದುರ್ಗ 1, ದಕ್ಷಿಣ ಕನ್ನಡ 4, ದಾವಣಗೆರೆ 3, ಧಾರವಾಡ 4, ಹಾಸನ  1, ಹಾವೇರಿ 2, ಕಲಬುರಗಿ 3, ಕೋಲಾರ 4, ಮಂಡ್ಯ 9, ಮೈಸೂರು 11, ರಾಯಚೂರು 1, ರಾಮನಗರ 5, ಶಿವಮೊಗ್ಗ 5, ತುಮಕೂರು 5, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 39,047 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 333, ಬಳ್ಳಾರಿ 1106, ಬೆಳಗಾವಿ 360, ಬೆಂಗಳೂರು ಗ್ರಾಮಾಂತರ 732, ಬೆಂಗಳೂರು ನಗರ 22,596, ಬೀದರ್ 269, ಚಾಮರಾಜನಗರ 424, ಚಿಕ್ಕಬಳ್ಳಾಪುರ 683, ಚಿಕ್ಕಮಗಳೂರು 297, ಚಿತ್ರದುರ್ಗ 110, ದಕ್ಷಿಣ ಕನ್ನಡ 664, ದಾವಣಗೆರೆ 196, ಧಾರವಾಡ 654, ಗದಗ 129, ಹಾಸನ 1,001, ಹಾವೇರಿ 36, ಕಲಬುರಗಿ 901, ಕೊಡಗು 388, ಕೋಲಾರ 1,194, ಕೊಪ್ಪಳ 444, ಮಂಡ್ಯ 935, ಮೈಸೂರು 1,759, ರಾಯಚೂರು 511, ರಾಮನಗರ 164, ಶಿವಮೊಗ್ಗ 333, ತುಮಕೂರು 1,174, ಉಡುಪಿ 664, ಉತ್ತರ ಕನ್ನಡ 301, ವಿಜಯಪುರ 394, ಯಾದಗಿರಿ ಜಿಲ್ಲೆಯಲ್ಲಿ 295 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 137 ಜನರು ಸಾವು

ರಾಜಧಾನಿಯಲ್ಲಿ ಬುಧವಾರದಂದು 22,596 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 137 ಜನರು ಮೃತಪಟ್ಟಿದ್ದಾರೆ. 4,530 ಸೋಂಕಿತರು ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 7,10,347  ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 6,139 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,80,055 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News