ಬೆಂಗಳೂರಿನ ವಿಚಾರ ಮಾತನಾಡಲ್ಲ, ನಾನು ಮೈಸೂರಿಗೆ ಸೀಮಿತ ಎಂದ ಸಚಿವ ಎಸ್.ಟಿ.ಸೋಮಶೇಖರ್

Update: 2021-05-06 10:49 GMT

ಮೈಸೂರು, ಮೇ 6: ಬೆಂಗಳೂರಿನ ಬೆಡ್ ಬ್ಲಾಕಿಂಗ್ ವಿಚಾರಕ್ಕೆ ಕೋಮು ಬಣ್ಣ ಕಟ್ಟುತ್ತಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಎಸ್.ಟಿ.ಸೋಮಶೇಖರ್, ನಾನು ಮೈಸೂರಿಗಷ್ಟೇ ಸೀಮಿತ ಎಂದು ಹೇಳಿದರು.

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಗುರುವಾರ ಕೋವಿಡ್ ಸಂಬಂಧ ಕೆ.ಆರ್.ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾನು ಬೆಂಗಳೂರಿನ ವಿಚಾರ ಮಾತನಾಡುವುದಿಲ್ಲ, ನಾನು ಮೈಸೂರಿಗಷ್ಟೇ ಸೀಮಿತ. ಮೈಸೂರಿನಲ್ಲಿ ಅಂತಹ ವಾತಾವರಣ, ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದರು.

ನೀವು ಯಶವಂತಪುರ ಶಾಸಕರು ಬೆಡ್ ಬ್ಲಾಕಿಂಗ್ ಗೆ ಕೋಮು ಬಣ್ಣ ಕಟ್ಟಲಾಗುತ್ತಿದೆ ಎಂದು ಮತ್ತೊಮ್ಮೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಉತ್ತರಿಸದೆ ವ್ಯಾಕ್ಸಿನ್, ಆಕ್ಸಿಜನ್, ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಮೈಸೂರಿಗೆ ಅಂತಹ ಅಪವಾದ ಬರಲು ಬಿಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News