ರಾಜ್ಯದಲ್ಲಿ ನಿಲ್ಲದ ಕೋವಿಡ್ ಆರ್ಭಟ: ಒಂದೇ ದಿನ ದಾಖಲೆಯ 592 ಸೋಂಕಿತರು ಮೃತ್ಯು

Update: 2021-05-07 16:30 GMT

ಬೆಂಗಳೂರು, ಮೇ 7: ಕಳೆದ 24 ಗಂಟೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚಾಗಿದ್ದು, 592 ಮಂದಿ ಸಾವನ್ನಪ್ಪಿದ್ದಾರೆ. 48,781 ಹೊಸ ಪ್ರಕರಣಗಳು ದೃಢಪಟ್ಟಿದ್ದು, 28,623 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 5,36,641 ಸಕ್ರಿಯ ಪ್ರಕರಣಗಳಿವೆ.

592 ಮಂದಿ ಸಾವು: ಬಾಗಲಕೋಟೆ 7, ಬಳ್ಳಾರಿ 24, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 346, ಬೀದರ್ 5, ಚಾಮರಾಜನಗರ 7, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 4, ದಕ್ಷಿಣ ಕನ್ನಡ 7, ದಾವಣಗೆರೆ 2, ಧಾರವಾಡ 7, ಗದಗ 3, ಹಾಸನ 20, ಹಾವೇರಿ 9, ಕಲಬುರಗಿ 19, ಕೊಡಗು 10, ಕೋಲಾರ 2, ಮಂಡ್ಯ 11, ಮೈಸೂರು 22, ರಾಯಚೂರು 4, ರಾಮನಗರ 10, ಶಿವಮೊಗ್ಗ 14, ತುಮಕೂರು 15, ಉಡುಪಿ 6, ಉತ್ತರಕನ್ನಡ 12, ವಿಜಯಪುರ 6 ಹಾಗೂ ಯಾದಗಿರಿ 1 ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶುಕ್ರವಾರ 48,781 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 661, ಬಳ್ಳಾರಿ 1,284, ಬೆಳಗಾವಿ 965, ಬೆಂಗಳೂರು ಗ್ರಾಮಾಂತರ 959, ಬೆಂಗಳೂರು ನಗರ 21,376, ಬೀದರ್ 437, ಚಾಮರಾಜನಗರ 725, ಚಿಕ್ಕಬಳ್ಳಾಪುರ 734 ಚಿಕ್ಕಮಗಳೂರು 632, ಚಿತ್ರದುರ್ಗ 126, ದಕ್ಷಿಣಕನ್ನಡ 1,633, ದಾವಣಗೆರೆ 538, ಧಾರವಾಡ 942, ಗದಗ 248, ಹಾಸನ 2,422, ಹಾವೇರಿ 214, ಕಲಬುರಗಿ 1,722, ಕೊಡಗು 622 ಕೋಲಾರ 828, ಕೊಪ್ಪಳ 523, ಮಂಡ್ಯ 1110, ಮೈಸೂರು 2246, ರಾಯಚೂರು 762, ರಾಮನಗರ 501, ಶಿವಮೊಗ್ಗ 563, ತುಮಕೂರು 3,040, ಉಡುಪಿ 976, ಉತ್ತರಕನ್ನಡ 833, ವಿಜಯಪುರ 445, ಯಾದಗಿರಿಜಿಲ್ಲೆಯಲ್ಲಿ 714 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 346 ಮಂದಿ ಸಾವು
ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 21,376 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 346 ಸೋಂಕಿತರು ಮೃತಪಟ್ಟಿದ್ದಾರೆ. 11,784 ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ 7,491 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 3,41,978 ಪ್ರಕರಣಗಳಿದ್ದು, ಅವರೆಲ್ಲರು ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News