ಶಿವಮೊಗ್ಗ: ಅಣ್ಣ- ತಮ್ಮಂದಿರ ನಡುವೆ ಗಲಾಟೆ; ಓರ್ವ ಮೃತ್ಯು

Update: 2021-05-11 16:20 GMT

ಶಿವಮೊಗ್ಗ,ಮೇ 11: ಕೆಲಸದಿಂದ ಮನೆಗೆ ತಡವಾಗಿ ಬಂದ ಹಿನ್ನಲೆಯಲ್ಲಿ ಅಣ್ಣ-ತಮ್ಮಂದಿರಿಬ್ಬರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನಿಗೆ ರಾಡ್‌ನಿಂದ ಹೊಡೆದು ಸಾಯಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆನಂದಪುರ ಸಮೀಪದ ಅಂಧಾಸುರದಲ್ಲಿ ಈ ಘಟನೆ ನಡೆದಿದ್ದು, ಹರೀಶ್ (30) ವರ್ಷ ಎಂಬಾತ ಸಾವಿಗೀಡಾದ ವ್ಯಕ್ತಿ.

ಆದರೆ ಕೊಲೆ ಆರೋಪವನ್ನು ಕುಟುಂಬಸ್ಥರು ನಿರಾಕರಿಸಿದ್ದು, 'ಅಣ್ಣ-ತಮ್ಮಂದಿರಿಬ್ಬರ ನಡುವೆ ಗಲಾಟೆ ನಡೆದಿದ್ದು ನಿಜ. ಅಣ್ಣ ಬೈದ ಎಂಬ ಕಾರಣಕ್ಕಾಗಿ ತಮ್ಮ ಹರೀಶ್ ಮನನೊಂದು ಯಾವುದೋ ಜೈವಿಕ ವಿಷ ಸೇವನೆ ಮಾಡಿದ್ದಾನೆ ಹೊರತು ಅಣ್ಣ ಯಾವುದೇ ಆಯುಧದಿಂದ ಹೊಡೆದಿದ್ದಾನೆ ಎಂಬುದಕ್ಕೆ ಕುರುಹುಗಳಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಒಟ್ಟಾರೆ ಅಣ್ಣ ತಮ್ಮಂದಿರ ಸಿಟ್ಟು ತಮ್ಮನ ಜೀವವನ್ನೇ ಬಲಿ ಪಡೆದುಕೊಂಡಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಮೃತನ ತಂದೆ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News