ಕೋವಿಡ್‍ನಿಂದ ಮೃತ್ಯು: ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಸಂಘಟನೆಗಳು

Update: 2021-05-11 18:13 GMT

ಚಿಕ್ಕಮಗಳೂರು ಮೇ 11: ಕೆ.ಎಂ.ಜೆ.ಸಿ., ಎಸ್ವೈಎಸ್ ಹಾಗೂ ಎಸ್ಸೆಸ್ಸೆಫ್ ಸಂಘಟನೆಗಳ ಸದಸ್ಯರು ಮಂಗಳವಾರ ಕೋವಿಡ್‍ನಿಂದ ನಿಧನರಾದ ಉಪ್ಪಳ್ಳಿಯ ನಿವಾಸಿಯೋರ್ವರನ್ನು ಹಿಂದೂ ಸಂಪ್ರದಾಯದಂತೆ ಉಪ್ಪಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಈ ಸಂಘಟನೆಗಳು ಜಿಲ್ಲೆಯಾದ್ಯಂತ ಕೋವಿಡ್‍ನಿಂದ ನಿಧನ ಹೊಂದಿದವರನ್ನು ಉಚಿತವಾಗಿ ಅವರ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ನಡೆಸುತ್ತಿದೆ. ಕೋವಿಡ್‍ನಿಂದ ನಿಧನ ಹೊಂದಿದ ಯಾವುದೇ ಧರ್ಮದವರು ಮೊಬೈಲ್ ಸಂಖ್ಯೆ 9731296712, 7892527006 ಗೆ ಸಂಪರ್ಕಿಸಿದರೆ ಉಚಿತವಾಗಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಸಂಘಟನೆಯ ಮುಖಂಡ ಮುನೀರ್ ಅಹಮದ್ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಯೂಸೂಫ್ ಹಾಜಿ, ಅಬೂಬಕರ್ ಸಿದ್ದಿಕ್ ಬದ್ರಿಯಾ, ಎಂ.ಪಿ.ಶೇಖ್, ರಜಾಕ್, ಸಂಶುದ್ದೀನ್, ಇರ್ಪಾನ್, ಕೆ.ಪಿ.ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News