ಮೈಸೂರು: ಮಗಳ ಮದುವೆಗೆ ಕೂಡಿಟ್ಟಿದ್ದ ಹಣ ಬಡವರಿಗೆ ನೀಡಿ ಮಾನವೀಯತೆ ಮೆರೆದ ಕುಟುಂಬ

Update: 2021-05-15 16:33 GMT

ಮೈಸೂರು, ಮೇ 15: ಮೈಸೂರು ಜಿಲ್ಲೆಯ ತಿಲಕ್ ನಗರದ ನಿವಾಸಿಯೋರ್ವರು ತಮ್ಮ ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ಲಾಕ್ ಡೌನ್ ಸಮಯದಲ್ಲಿ ಕಷ್ಟಪಡುತ್ತಿರುವ ಬಡ ಕುಟುಂಬಗಳಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ತಿಲಕ್ ನಗರದ ಹರೀಶ್ ಎಂಬವರ ಮಗಳ ಮದುವೆ ಇದೇ ತಿಂಗಳ 12 ಮತ್ತು 13ರಂದು ನಿಗದಿಯಾಗಿತ್ತು. ಆದರೆ, ಕೊರೋನ ಸೋಂಕು ಹೆಚ್ಚಾದ ಕಾರಣ ಲಾಕ್ಡೌನ್ ಘೋಷಿಸಲಾಯಿತು. ಹೀಗಾಗಿ ಹರೀಶ್ ಅವರು ತಮ್ಮ ಮಗಳ ಮದುವೆಯನ್ನು ಮನೆಯಲ್ಲಿಯೇ ಸರಳವಾಗಿ ಮಾಡಿ, ಉಳಿದ 2 ಲಕ್ಷ ರೂ. ಗಳನ್ನು 40 ಬಡ ಕುಟುಂಬಗಳಿಗೆ ತಲಾ 5 ಸಾವಿರದಂತೆ ನೀಡಿ ಮಾನವೀಯತೆ ಮೆರೆದಿದ್ದಾರೆ. 

'ಈ ಬಗ್ಗೆ ನನಗೆ ಪ್ರಚಾರ ಬೇಡ, ದಯಮಾಡಿ ಕೊರೋನ ರೋಗ ತೊಲಗಿ ಎಲ್ಲರೂ ನೆಮ್ಮದಿಯಿಂದ ಇರಬೇಕು' ಅವರು ದೇವರನ್ನು ಬೇಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News