ಚಿಕ್ಕಮಗಳೂರು: ಮನೆಗೆ ಬಂದ ಕೊರೋನ ಸೋಂಕಿತ ಅಣ್ಣನನ್ನು ಕೊಲೆಗೈದ ತಮ್ಮ

Update: 2021-05-16 10:48 GMT

ಚಿಕ್ಕಮಗಳೂರು, ಮೇ 16: ಕೊರೋನ ಸೋಂಕಿಗೆ ತುತ್ತಾಗಿದ್ದ ಅಣ್ಣ ಮನೆಗೆ ಬಂದಾಗ ತಮ್ಮನೇ ಕೊಲೆಗೈದ ಘಟನೆ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ರವಿವಾರ ನಡೆದಿದೆ.

ಮಹಾವೀರ (45) ಕೊಲೆಯಾದ ವ್ಯಕ್ತಿ. ಆರೋಪಿ ಪಾಶ್ವನಾಥ ಕೊಲೆ ಆರೋಪಿ.

ಕೊರೋನ ಸೋಂಕಿಗೆ ತುತ್ತಾಗಿದ್ದ ಮಹಾವೀರ ಇಂದು ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದಾರೆ. ಸೋಂಕು ಸಂಪೂರ್ಣ  ಗುಣಮುಖವಾಗದಿದ್ದರೂ ಏಕೆ ಮನೆಗೆ ಬಂದಿದ್ದೀಯ ಎಂದು ತಮ್ಮ ಪಾಶ್ವನಾಥ ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾದಾಗ, ತಮ್ಮ ಪಾಶ್ವನಾಥ ಅಣ್ಣನನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News