ಕೋವಿಡ್-19 ಸಂಕಷ್ಟಕ್ಕೊಳಗಾಗಿ ಸಾವೀಗೀಡಾದ ಕುಟುಂಬದ ಮಕ್ಕಳಿಗೆ ಸುತ್ತೂರು ಶ್ರೀಕ್ಷೇತ್ರದ ವತಿಯಿಂದ ಉಚಿತ ಶಿಕ್ಷಣ

Update: 2021-05-22 17:08 GMT

ಮೈಸೂರು,ಮೇ.22: ಕೋವಿಡ್-19 ಸಂಕಷ್ಟಕ್ಕೊಳಗಾಗಿ ಕರ್ನಾಟಕದ ಎಲ್ಲಾಭಾಗಗಳಲ್ಲಿ ಸಾವೀಗೀಡಾದ ಕುಟುಂಬದವರ ಮಕ್ಕಳಿಗೆ ಸುತ್ತೂರು ಶ್ರೀಕ್ಷೇತ್ರದ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಕಲ್ಪಿಸಲು ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಿರ್ಧರಿಸಿದ್ದಾರೆ.

1 ರಿಂದ 10ನೇ ತರಗತಿವರೆಗೆ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳನ್ನು ಶಾಲೆಗೆ ದಾಖಲಿಸಬಹುದಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸ ಬಯಸುವ ಪೋಷಕರು ಹಾಗು ಕುಟುಂಬದ ಸದಸ್ಯರು 7411486938 ದೂರವಾಣಿಯಲ್ಲಿ ಸಂಪರ್ಕಿಸಿ ವಿವರ ಪಡೆದು ನೊಂದಾಯಿಸಿಕೊಳ್ಳಲು ಪತ್ರಿಕಾ ಹೇಳಿಕೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News