ನಿಯಮ ಉಲ್ಲಂಘಿಸಿ ಮದುವೆ: ವೈದ್ಯ ದಂಪತಿ ಸೇರಿ ಐವರ ವಿರುದ್ಧ ಪ್ರಕರಣ

Update: 2021-05-22 18:22 GMT

ವಿಜಯನಗರ, ಮೇ 22: ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ತಾತ್ಕಾಲಿಕ ತಡೆ ಹಾಕಿದ್ದರೂ, ಇಲ್ಲಿನ ಹರಪನಹಳ್ಳಿ ತಾಲೂಕಿನ ನಿಲುವಂಜಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನೆರವೇರಿಸಿದ ಆರೋಪದಡಿ ವೈದ್ಯ ದಂತಪಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಲುವಂಜಿ ಗ್ರಾಮದ ಎನ್.ಬಸವರಾಜ್, ಕಮಲಮ್ಮ, ಬಸವರಾಜ್, ವಧು ಖಾಸಗಿ ವೈದ್ಯೆ ಡಾ.ಬಸವರಾಜೇಶ್ವರಿ, ವರ ಡಾ.ಎಚ್.ಬಿ.ಸಿದ್ದಪ್ಪ ಮೇಲೆ ಪ್ರಕರಣ ದಾಖಲಾಗಿದೆ.

ಮೇ 20ರಂದು ಖಚಿತ ಮಾಹಿತಿ ಪಡೆದ ಪ್ರಭಾರ ಕಂದಾಯ ನಿರೀಕ್ಷಕ ಎಚ್.ಹೊನ್ನಪ್ಪ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ.ಚನ್ನಬಸಯ್ಯ, ಪಿಡಿಒ ಅಂಜಿನಪ್ಪ, ನೀರಗಂಟಿ ಕೊಟ್ರೇಶ್ ಅವರ ತಂಡ ನಿಲುವಂಜಿ ಗ್ರಾಮದಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ, ಹೆಚ್ಚಿನ ಜನ ಜಮಾವಣೆಗೊಂಡಿರುವುದು ಗೊತ್ತಾಗಿದೆ.

ಈ ಸಂಬಂಧ ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಟಿ.ಅಂಜಿನಪ್ಪ ನೀಡಿದ ದೂರಿನ ಮೇರೆಗೆ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News