ಶಿವಮೊಗ್ಗ: ಜಿಯೋ ಕಂಪನಿ ಮ್ಯಾನೇಜರ್ ಹೆಸರಲ್ಲಿ ಮಹಿಳೆಗೆ 77 ಸಾವಿರ ರೂ. ವಂಚನೆ

Update: 2021-06-07 16:27 GMT

ಶಿವಮೊಗ್ಗ, ಜೂ.7: ಜಿಯೋ ಕಂಪನಿ ಮ್ಯಾನೇಜರ್ ಎಂದು ಫೋನ್ ಮಾಡಿ ಹೊಸಮನೆ ಬಡಾವಣೆಯ ಮಹಿಳೆಯೊಬ್ಬರಿಗೆ 77 ಸಾವಿರ ರೂ. ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಜಿಯೋ ಕಂಪನಿ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. 25 ಲಕ್ಷ ರೂ. ಬಹುಮಾನ ಬಂದಿದೆ ಎಂದು ತಿಳಿಸಿದ್ದಾನೆ. ಬಹುಮಾನದ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಸಂಬಂಧ ಮತ್ತೋರ್ವ ಮ್ಯಾನೇಜರ್ ರಾಣಾ ಪ್ರತಾಪ್ ಸಿಂಗ್ ಎಂಬುವವರು ಕರೆ ಮಾಡಿ ಮಾಹಿತಿ ನೀಡುತ್ತಾರೆ ಎಂದು ಮಹಿಳೆಗೆ ಹೇಳಿದ್ದಾನೆ. ಕೆಲವೇ ಹೊತ್ತಿನಲ್ಲಿ ಜಿಯೋ ಕಂಪನಿ ಮ್ಯಾನೇಜರ್ ಸೋಗಿನಲ್ಲಿ ಮತ್ತೊಂದು ನಂಬರ್‌ನಿಂದ ಕರೆ ಮಾಡಲಾಗಿದೆ.

ಈ ವೇಳೆ 'ಬಹುಮಾನ ವರ್ಗಾವಣೆ ಮಾಡಲು ಕೆಲವು ಚಾರ್ಜ್ ಕಟ್ಟಬೇಕು' ಎಂದು ತಿಳಿಸಿದ್ದಾನೆ. ಅದರಂತೆ ಹಂತ ಹಂತವಾಗಿ 77,100 ರೂ. ಹಣವನ್ನು ಮಹಿಳೆಯಿಂದ ಪೋನ್ ಪೇ ಮೂಲಕ ಪಡೆದುಕೊಂಡಿದ್ದಾನೆ. ಬಳಿಕ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News