ಇಂದೂರ: ವಿದ್ಯುತ್ ಅವಘಡದಿಂದ ಮನೆ ಬೆಂಕಿಗಾಹುತಿ

Update: 2021-06-08 07:17 GMT

ಮುಂಡಗೋಡ, ಜೂ.8: ವಿದ್ಯುತ್ ಅವಘಡದಿಂದ ಮನೆ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಇಂದೂರ ಗ್ರಾಮದ ಕುನ್ನೂರ ಓಣಿಯಲ್ಲಿ ಸೋಮವಾರ ತಡರಾತ್ರಿ 1:30ಕ್ಕೆ ಸಂಭವಿಸಿರುವುದು ವರದಿಯಾಗಿದೆ.

 ಇಲ್ಲಿನ ನಿವಾಸಿ ಫರೀದಾ ಬಾನು ಎಮ್ಮತ್ತನವರ ಎಂಬವರ ಮನೆಯೇ ಬೆಂಕಿಗೆ ಆಹುತಿಯಾಗಿದ್ದು. ರಾತ್ರಿ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಕ್ಕಪಕ್ಕದ ಮನೆಮಂದಿ ಎದ್ದು ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಳಿಕ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದರಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿವುದು ತಪ್ಪಿದೆ.

 ಅವಘಡದಿಂದ ಫರೀದಾ ಬಾನು ಮಗಳ ಮದುವೆಗೆ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳು ಸೇರಿದಂತೆ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿವೆ. ಇದರಿಂದ 2-3 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಶಾರ್ಟ್ ಸರ್ಕ್ಯೂಟ್ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News