ಮಾನವೀಯ ಗುಣ ನಡತೆಗಳಿಂದ ಎಲ್ಲರ ಮನಗೆದ್ದು ಮಿಂಚಿ ಮರೆಯಾದ ಸಂಚಾರಿ ವಿಜಯ್: ಸಿದ್ದರಾಮಯ್ಯ

Update: 2021-06-15 09:34 GMT

ಬೆಂಗಳೂರು, ಜೂ.15: ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಲನಚಿತ್ರ ನಟ ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂಗಾಂಗ ದಾನದ ವಿಜಯ್ ಕುಟುಂಬದ ನಿರ್ಧಾರಕ್ಕೆ ನನ್ನ ನಮನಗಳು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಪ್ರತಿಭೆ ಮತ್ತು ಮಾನವೀಯ ಗುಣ ನಡತೆಗಳಿಂದ ಕಿರಿ ವಯಸ್ಸಿನಲ್ಲಿಯೇ ಎಲ್ಲರ ಮನಗೆದ್ದು ಮಿಂಚಿ ಮರೆಯಾದ ನಟ ಸಂಚಾರಿ ವಿಜಯ್ ಸಾವಿನಿಂದ ದುಃಖಿತನಾಗಿದ್ದೇನೆ. ವಿಜಯ್ ಕುಟುಂಬ ಮತ್ತು ಅಭಿಮಾನಿ ಬಳಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅಂಗಾಂಗ ದಾನದ ವಿಜಯ್ ಕುಟುಂಬದ ನಿರ್ಧಾರಕ್ಕೆ ನನ್ನ ನಮನಗಳು' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News